ಕೈ ಕೊಟ್ಟ ಮಳೆ : ಸಾಲದ ಹೊರೆ ತಾಳದೆ ಅನ್ನದಾತನ ಸರಣಿ ಆತ್ಮಹತ್ಯೆ
1 min readಚಿಕ್ಕಮಗಳೂರು : ಮುಂಗಾರು ಮಳೆ ಕೈ ಕೊಟ್ಟ ಬೆನ್ನಲ್ಲೆ ಮಲೆನಾಡ ಜಿಲ್ಲೆಯಲ್ಲಿರುವ ಬಯಲು ಸೀಮೆ ಪ್ರದೇಶದ ಇಬ್ಬರು ರೈತರು ಸಾಲಭಾದೆ ತಾಳಲಾರದೆ ಸರಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಲೆನಾಡು ಭಾಗವಾದ ಚಿಕ್ಕಮಗಳೂರಿನಲ್ಲಿಯೂ ವರುಣನು ಕಣ್ಣಮುಚ್ಚಾಲೆ ಆಡಿ, ಕಡೆಗೂ ಕೈ ಕೊಟ್ಟಿದ್ದಾನೆ. ತಡವಾಗಿ ಮುಂಗಾರು ಮಳೆಯ ಆಗಮನದಿಂದ ಕೈಕಟ್ಟಿ ಕುಳಿತಿದ್ದ ರೈತರು ಸಾಲಸೂಲ ಮಾಡಿ ಬಿತ್ತನೆ ಸೇರಿದಂತೆ ಕೃಷಿ ಕೆಲಸಗಳನ್ನು ಚುರುಕುಗೊಳಿಸಿದರು. ಆದರೆ ತಡವಾಗಿ ಬಂದ ಮುಂಗಾರು ಮಳೆ ಅಷ್ಟೇ ಬೇಗ ಕೈಕೊಟ್ಟು ರೈತರನ್ನು ಬೆಸ್ತುಗೊಳಿಸಿತು. ಇತ್ತ ಬೆಳೆಯು ಇಲ್ಲದೆ ಸಾಲಸೂಲ ಮಾಡಿದ ಹಣಕ್ಕೆ ಬಡ್ಡಿ, ದಂಡವು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಳೆ ಇಲ್ಲದೆ ಬೆಳೆ ನಾಶವಾದ ಹಿನ್ನೆಲೆ ಮನನೊಂದು ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರು ಗ್ರಾಮದ 52 ವರ್ಷದ ರೈತ ಪರಮೇಶ್ವರಪ್ಪ ತನ್ನ 3 ಎಕರೆ ಜಮೀನಿನಲ್ಲಿ ಹಾಕಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿ ಕೈಕೊಟ್ಟಿದೆ. ಈರುಳ್ಳಿ ಬೆಳೆಯ ಮೇಲೆ ಬ್ಯಾಂಕ್ ಹಾಗೂ ಕೈ ಸಾಲ ಮಾಡಿ ಹಾಕಿದ್ದ 5 ಲಕ್ಷ ರೂಪಾಯಿ ಸಾಲ, ದಂಡವನ್ನು ತೀರಿಸಲಾಗಿದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ನಿನ್ನೆ ಗಿರಿಯಾಪುರದ ರೈತ ಸತೀಶ್ ಕೂಡ ಬೆಳೆ ಕೈಕೊಟ್ಟ ಹಿನ್ನೆಲೆ ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಸಿರಾಗಿರುವ ಬೆನ್ನಲೆ, ಮತ್ತೊಬ್ಬ ರೈತನ ಆತ್ಮಹತ್ಯೆಗೆ ಶರಣಾಗಿರುವುದು ಆತಂಕಕ್ಕೀಡು ಮಾಡಿದೆ.
ಸರ್ಕಾರವು ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಎಚ್ಚೆತ್ತುಕೊಳ್ಳುವ ಬದಲು, ಮಳೆ ಕೈಕೊಟ್ಟ ಹಿನ್ನೆಲೆ ಸಾಲದ ಹೊರೆ ತಾಳಲಾರದೆ ಅನ್ನದಾತನು ಆತ್ಮಹತ್ಯೆ ಮಾಡಿಕೊಂಡು, ಆತನ ಕುಟುಂಬವು ಆನಾಥರಾಗುವ ಮುನ್ನ, ಸತ್ತ ನಂತರ ಪರಿಹಾರ ಧನ ನೀಡುವ ಬದಲು ಸಾಮೂಹಿಕ ಸನ್ನಿಯಂತೆ ಸರಣಿ ಆತ್ಮಹತ್ಯೆ ಮುಂದುವರೆಯುವ ಮುನ್ನ ಅನ್ನದಾತರಿಗೆ ಆತ್ಮವಿಶ್ವಾಸ ಮೂಡಿಸುವ ಕ್ರೀಯಾ ಯೋಜನೆಗಳನ್ನು ಸಿದ್ದಪಡಿಸಿ ಅನ್ನದಾತನನ್ನು ರಕ್ಷಿಸಲಿ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g