ಪ್ಲಾಸ್ಟಿಕ್ ಎಲ್ಲಿ ಉತ್ಪಾದಿಸಲಾಗುತ್ತಿದೆಯೋ ಅಲ್ಲೇ ಅದನ್ನ ತಡೆ ಹಿಡಿಯುವುದು ಸೂಕ್ತ; ಬಿ.ಸಿ ಬಸವರಾಜ್
1 min readಪ್ಲಾಸ್ಟಿಕ್ ಬಳಕೆ ನಿಷೇಧಿಸಿರುವ ನಿಟ್ಟಿನಲ್ಲಿ, ಪ್ಲಾಸ್ಟಿಕ್ ಎಲ್ಲಿ ಉತ್ಪಾದಿಸಲಾಗುತ್ತಿದೆಯೋ ಅಲ್ಲೇ ಅದನ್ನ ತಡೆ ಹಿಡಿಯುವುದು ಸೂಕ್ತ ಎಂದು ನಗರಸಭೆ ಆಯುಕ್ತ ಬಿ. ಸಿ ಬಸವರಾಜ್ ಹೇಳಿದರು.
ಚಿಕ್ಕಮಗಳೂರು ನಗರಸಭೆ ವತಿಯಿಂದ, ನಗರಸಭಾ ಕಾರ್ಯಾಲಯದ ಆವರಣದಲ್ಲಿ ‘ತೆರಿಗೆ ವಸೂಲಾತಿ ಆಂದೋಲನ’ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಾಂಧಿ ಜಯಂತಿ ದಿನದಂದು ಸ್ವಚ್ಛತಾ ಆಂದೋಲನ ಸಂದರ್ಭದಲ್ಲಿ ಸ್ಥಳೀಯ ಎಲ್ಲಾ ಶಾಸಕ, ಸಚಿವರು, ನಗರಸಭೆ ಕೂಡ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಬಳಸದಂತೆ ಮತ್ತು ಬಳಸಿದಲ್ಲಿ ಕಟ್ಟುನಿಟ್ಟಾಗಿ ಮತ್ತು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಹಿಂದೆ ನಗರದಲ್ಲಿ ಅಂಗಡಿ ಮುಂಗಟುಗಳನ್ನು ಮುಚ್ಚಿಸಿ ಬಳಕೆ ಮಾಡಿದವರಿಗೆ ಸಹ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದ್ದೇವೆ. ಆದ್ದರಿಂದ ಪ್ಲಾಸ್ಟಿಕ್ ಎಲ್ಲಿ ಉತ್ಪಾದಿಯಾಗುತ್ತಿದೆಯೋ ಅಲ್ಲೇ ಅದನ್ನ ತಡೆ ಹಿಡಿಯುವುದು ಸೂಕ್ತ ಎಂದು ತಿಳಿಸಿದರು. ನಗರಸಭಾ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧ ಮಾಡಿರುವುದರಿಂದ ಹೋಲ್ಸೇಲ್ ಅಂಗಡಿಗಳಲ್ಲಿ ಪ್ಲಾಸ್ಟಿಕ್ ನನ್ನು ಮಾರದಂತೆ ತಿಳಿಸಿದ್ದೇವೆ. ಮತ್ತೆ ಅಂಗಡಿಗಳಲ್ಲಿ ಮಾರುತ್ತಿರುವುದು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು. ಒಂದು ಬಾರಿ ಎರಡು ಬಾರಿ ದಂಡ ವಿಧಿಸಿ ಎಚ್ಚರಿಕೆ ನೀಡಿದ ನಂತರವೂ ಕೂಡ ಅದೇ ಕೆಲಸವನ್ನು ಮಾಡುತ್ತಿದ್ದರೆ ಅವರಿಗೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g