May 21, 2024

MALNAD TV

HEART OF COFFEE CITY

ಮುಳ್ಳಯ್ಯನಗಿರಿಯಲ್ಲಿ ನೀಲಿಕುರಂಜಿ ಹೂವಿನ ಗಿಡ ಕಿತ್ತ ಪ್ರವಾಸಿಗರಿಗೆ ಸ್ಥಳಿಯರ ಕ್ಲಾಸ್

1 min read

 

ಚಿಕ್ಕಮಗಳೂರು : ರಾಜ್ಯದ ಸುಪ್ರಸಿದ್ಧ ಪ್ರವಾಸಿ ತಾಣ, ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ತಾಲೂಕಿನ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರಿಗೆ ಪ್ರವಾಸಿಗರೇ ಕ್ಲಾಸ್ ತೆಗೆದುಕೊಂಡಿದ್ದಾರೆ. ತಾಲೂಕಿನ ಗಿರಿಭಾಗದ ಸುತ್ತಮುತ್ತಲಿನ ಗುಡ್ಡಗಳಲ್ಲಿ ನೀಲಿ ಕುರಂಜಿ ಹೂವು ಅರಳಿ ನಿಂತಿದೆ. ಹಸಿರ ಬೆಟ್ಟಗಳು ಸಂಪೂರ್ಣ ನೀಲಿಯಾಗಿದ್ದು ಜಿಲ್ಲೆಯ ಗಿರಿ ಭಾಗದ ಬೆಟ್ಟಗುಡ್ಡಗಳಲ್ಲಿ ಹೊಸದೊಂದು ಲೋಕವೇ ಸೃಷ್ಠಿಯಾಗಿದೆ. ಪ್ರಕೃತಿಯ ಈ ಸುಂದರ-ಸೊಬಗನ್ನ ಕಣ್ತುಂಬಿಕೊಳ್ಳಲು ತಾಲೂಕಿನ ಗಿರಿ ಭಾಗಕ್ಕೆ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ, ಸಾವಿರಾರು ಪ್ರವಾಸಿಗರ ಮಧ್ಯೆ ಬರುವ ಅಲ್ಲೊಬ್ಬ-ಇಲ್ಲೊಬ್ಬ ಕಿಡಿಗೇಡಿಗಳು ಇಲ್ಲಿನ ಸೌಂದರ್ಯವನ್ನ ಸವಿಯೋದ ಬಿಟ್ಟು ಗಿಡಗಳನ್ನ ಕಿತ್ತು ತೆಗೆದುಕೊಂಡು ಹೋಗುತ್ತಿದ್ದಾರೆ.

ಈ ಪ್ರಕೃತಿ ಮಧ್ಯಯೇ ಈ ಹೂ ವಾರಕ್ಕಿಂತ ಹೆಚ್ಚು ದಿನ ಇರಲ್ಲ. ಹೀಗಿರುವಾಗ ಪ್ರವಾಸಿಗರು ಹೂವಿನ ಸಮೇತ ಗಿಡಗಳನ್ನೂ ಕಿತ್ತುಕೊಂಡು ಹೋದರೆ ಅವರು ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಊರುಗಳಿಗೆ ಹೋಗುವವರೆಗೂ ಆ ಗಿಡ ನಿಜಕ್ಕೂ ಇರುತ್ತಾ. ಕೆಲ ಪ್ರವಾಸಿಗರು ಆ ಸಾಮಾನ್ಯ ಜ್ಞಾನ ಇಲ್ಲದಂತೆ ವರ್ತಿಸುತ್ತಿರೋದ್ರಿಂದ ಪ್ರವಾಸಿಗರಿಗೆ ಪ್ರವಾಸಿಗರೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಗಿರಿಯಿಂದ ಕೆಳಗೆ ಬರುವಾಗ ಕೈಯಲ್ಲಿ ಗಿಡ-ಹೂವನ್ನ ನೋಡುವ ಸ್ಥಳಿಯರು ಕೂಡ ಪ್ರವಾಸಿಗರಿಗೆ ಹಿಗ್ಗಾ-ಮುಗ್ಗಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಬಂದಂತಹಾ ಪ್ರವಾಸಿಗರು ಸೌಂದರ್ಯವನ್ನ ಸವಿಯಬೇಕು. ಫೋಟೋ ಕ್ಲಿಕ್ಕಿಸಿಕೊಂಡು, ವಿಡಿಯೋ ಮಾಡಿಕೊಂಡು ಹೋಗಬೇಕು. ಅದನ್ನ ಬಿಟ್ಟು ಹೂ-ಗಿಡಗಳನ್ನ ಕಿತ್ತು ಹಾಳು ಮಾಡುತ್ತಿರುವುದು ನಮ್ಮ ವರವಾಗಿರುವ ಪ್ರಕೃತಿಯನ್ನ ನಾವೇ ಹಾಳು ಮಾಡಿದಂತೆ. ಪ್ರವಾಸಿಗರಿಗೆ ಆ ಸಾಮಾನ್ಯ ಜ್ಞಾನ ಕೂಡ ಇಲ್ಲದಿರೋದು ನಿಜಕ್ಕೂ ದುರಂತ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!