ಪ್ರಜೆಗಳ ಧ್ವನಿ ಕೇಳಬೇಕು, ಮೈಕ್ ಹಿಡಿದು ಕೂಗೊದಲ್ಲ : ಸಿ.ಟಿ. ರವಿ
1 min readಚಿಕ್ಕಮಗಳೂರು : ಕಾಂಗ್ರೆಸ್ಸಿಗರು ಜನ ಸೇರಿಸೋದು, ಮೋದಿಗೆ ಜನ ಸೇರೋದು, ಮೋದಿ ಬರ್ತಾರೆ ಅಂದ್ರೆ ಲಕ್ಷ-ಲಕ್ಷ ಜನ ಸೇರುತ್ತಾರೆ, ಸೇರೋದಕ್ಕೂ, ಸೇರ್ಸೋದಕ್ಕೂ ವ್ಯತ್ಯಾಸವಿದೆ, ಸೇರ್ಸೋದು ಹಲವು ಕಾರಣಕ್ಕೆ, ಸೇರೋದು ಪ್ರೀತಿಗೆ ಮಾತ್ರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ. ರವಿ ವ್ಯಂಗ್ಯವಾಡಿದರು.
ಕಾಂಗ್ರೆಸ್ಸಿನವರು ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯ ಮಾತನಾಡಿದ ಅವರು ಪ್ರಜೆಗಳ ಬಲ ಮೋದಿಯವರ ಜೊತೆ ಇದೆ, ಆದರೆ, ಕಾಂಗ್ರೆಸ್ ಪ್ರಜೆಗಳ ಧ್ವನಿಯನ್ನ ಅವರು ಕೇಳಬೇಕು, ಅವರ ಧ್ವನಿಯನ್ನ ಪ್ರಜೆಗಳಿಗೆ ಕೇಳಿಸುತ್ತಿದ್ದಾರೆ. ಪಿ.ಎಫ್.ಐ. ಕಾರ್ಯಕರ್ತರನ್ನ ಬಿಟ್ಟಿದ್ದು, ಅಮಾಯಕರ ಹತ್ಯೆಯಾಗಿದ್ದು, ರಿಡ್ಯೂ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದದ್ದು, ಜನ ಅವರ ಸಾಧನೆಯನ್ನ ಪಿಸುಗುಡುತ್ತಿಲ್ಲ, ಕೂಗಿ-ಕೂಗಿ ಹೇಳ್ತಿದ್ದಾರೆ, ಪ್ರಜಾಧ್ವನಿ ಅಂದರೆ ಪ್ರಜೆಗಳ ಧ್ವನಿಯನ್ನ ಕೇಳಬೇಕು, ಇವರು ಮೈಕ್ ಹಿಡಿದು ಕೂಗೋದಲ್ಲ. ನಮ್ಮ ಪ್ರಶ್ನೆಗೆ ನೇರವಾಗಿ ಉತ್ತರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ಸಿಗರು ಇಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಧ್ವನಿ ಚುನಾವಣೆಯಲ್ಲಿ ಕೇಳುತ್ತದೆ ಎಂದರಲ್ಲದೆ, ಕಾಂಗ್ರೆಸಿಗರಿಗೆ ಗತಿ ಇಲ್ಲ ಇಟಲಿ ರಾಣಿಯನ್ನ, ಬಂಡವಾಳ ಮಾಡಿಕೊಂಡಿದ್ದಾರೆ. ರಾಮನ ಹೆಸರು ಬರೆದರೆ ಮುಳುಗುವ ಕಲ್ಲು ತೇಲುತ್ತಿತ್ತು, ಕಾಂಗ್ರೆಸಿಗರು ಮೋದಿ ಹೆಸರೇಳಿದರೆ ಮುಳುಗುವವರು ತೇಲಬಹುದು, ಮೋದಿ, ಈ ಮಣ್ಣಿನ ಮಗ ಸಾಮಾನ್ಯವಾದ ಬಡ ಕುಟುಂಬದಿಂದ ಬಂದವರು. 20 ವರ್ಷದಿಂದ ಒಂದೇ ಒಂದು ಹಗರಣ ಕೂಡ ಇಲ್ಲದ ನಾಯಕತ್ವ. ಪ್ರತಿ ಸಂದರ್ಭದಲ್ಲಿ ದಲಿತರು ಮಹಿಳೆಯರು ಬಡವರ ಅಭಿವೃದ್ಧಿ ಹಾಗೂ ಗೌರವದ ಬಗ್ಗೆ ಚಿಂತಿಸುವವರು. ಅಂಬೇಡ್ಕರ್ ಅವರ ಲೆಗಸಿಯನ್ನ ಎತ್ತಿ ಹಿಡಿಯುವ ಕೆಲಸ ಮಾಡಿದವರು. ಅಂಥವರನ್ನು ನಾವು ಬಂಡವಾಳ ಮಾಡಿಕೊಳ್ಳದೆ ಕಾಂಗ್ರೆಸ್ಸಿಗರು ಮಾಡಿಕೊಳ್ಳಲು ಸಾಧ್ಯವೇ. ಮೋದಿ ಅಂತ ನಾಯಕರಿಲ್ಲ ಎಂದು ಅವರು ಬಂಡವಾಳ ಮಾಡಿಕೊಳ್ಳಲಿ ಬೇಡ ಅಂದವರು ಯಾರು. ನಾಳೆಯಿಂದ ಮೋದಿ ಮಾಡಿರುವ ಒಳ್ಳೆಯ ಕೆಲಸವನ್ನು ಹೇಳಿಕೊಂಡು ಓಡಾಡಲಿ ಬೇಡ ಅಂದವರು ಯಾರು. ಕಾಂಗ್ರೆಸಿಗರು ಮೋದಿ ಹೆಸರೇಳಿ ಡೆಪಾಸಿಟ್ ಹೋಗೋದನ್ನ ತಪ್ಪಿಸಿಕೊಳ್ಳಬಹುದು, ತಪ್ಪಿಸಿಕೊಳ್ಳಲಿ. ಎಂದು ಲೇವಡಿ ಮಾಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g