ಮೋಟಾರ್ ಸೈಕಲ್ ಕಳವು ಪ್ರಕರಣ: ಓರ್ವ ಆರೋಪಿ ಬಂಧನ
1 min readತರೀಕೆರೆ : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಬಸವನಹಳ್ಳಿ, ಮೂಡಿಗೆರೆ ಮತ್ತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಸೇರಿದಂತೆ ದಾವಣಗೆರೆ ಮತ್ತು ಹಾಸನ ಜಿಲ್ಲೆಗಳಲ್ಲಿ ಮೋಟಾರ್ ಸೈಕಲ್ ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ತರೀಕೆರೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಬಸವನಹಳ್ಳಿ, ಮೂಡಿಗೆರೆ ಮತ್ತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಸೇರಿದಂತೆ ದಾವಣಗೆರೆ ಮತ್ತು ಹಾಸನ ಜಿಲ್ಲೆಗಳಲ್ಲಿ ಮೋಟಾರ್ ಸೈಕಲ್ ಗಳನ್ನು ಕಳವು ಮಾಡಿದ್ದ ತರೀಕೆರೆ ತಾಲೂಕಿನ ಲಿಂಗದಹಳ್ಳಿಯ ದೊಡ್ಡನಿಂಗೇನಹಳ್ಳಿ ವಾಸಿಯಾದ 32 ವರ್ಷದ ಪ್ರತಾಪ್ ಅಲಿಯಾಸ್ ಪ್ರತಾಪ್ ನಾಯ್ಕ್ ನನ್ನು ಪಿ.ಐ. ತರೀಕೆರೆ ಪೊಲೀಸ್ ಠಾಣೆ ನೇತೃತ್ವದ ಪೊಲೀಸ್ ತಂಡ ಬಂಧಿಸಿದ್ದಾರೆ. ಬಂಧಿತ ಆರೋಪಿ ಪ್ರತಾಪ್ ನಾಯ್ಕ್ ನಿಂದ ಪಡೆದು, ರೂ. 2.48 ಲಕ್ಷ ಮೌಲ್ಯದ ಒಟ್ಟು 7 ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೋಟರ್ ಸೈಕಲ್ ಕಳವು ಪ್ರಕರಣ ಪತ್ತೆ ಮಾಡಿದ ತಂಡದಲ್ಲಿ ಪಿ.ಐ. ತರೀಕೆರೆ ಪೊಲೀಸ್ ಠಾಣೆ ಶ್ರೀ. ವೀರೇಂದ್ರ, ಪಿ.ಎಸ್.ಐ. ಗಳಾದ ಶ್ರೀ. ಯೋಗೀಶ್ವರನ್, ಶ್ರೀ. ಬಿ. ಎಸ್. ಬಗಲಿ, ಶ್ರೀ. ಕೃಷ್ಣನಾಯ್ಕ್, ಶ್ರೀ. ಅಭಿಷೇಕ್, ಶ್ರೀಮತಿ. ಅಕ್ಷಿತಾ ಮತ್ತು ಪೊಲೀಸ್ ಸಿಬ್ಬಂದಿಗಳಾದ ಶ್ರೀ. ನಾಗೇಶ್, ಶ್ರೀ. ರುದ್ರೇಶ್, ಶ್ರೀ. ಲಿಂಗಮೂರ್ತಿ, ಶ್ರೀ. ನಂಜುಂಡಸ್ವಾಮಿ ಮತ್ತು ಶ್ರೀ. ಗಿರೀಶ್ ರವರು ಭಾಗವಹಿಸಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g