ಎನ್.ಮಹೇಶ್ ನೆಲೆಗಾಗಿ ಬಿಜೆಪಿಗೆ ಬಂದಿದ್ದಾರೆ : ಎಂ.ಪಿ.ಕುಮಾರಸ್ವಾಮಿ
1 min readಚಿಕ್ಕಮಗಳೂರು : ಎನ್.ಮಹೇಶ್ರನ್ನ ಕಾಂಗ್ರೆಸ್-ಜೆಡಿಎಸ್ ಬಿಟ್ಟಾಕಿದೆ, ಬಿಎಸ್ಪಿ ಉಚ್ಛಾಟನೆ ಮಾಡಿದೆ, ಕೊಳ್ಳೆಗಾಲ ಶಾಸಕ ಎನ್.ಮಹೇಶ್ ನೆಲೆಗಾಗಿ ಬಿಜೆಪಿಗೆ ಬಂದಿದ್ದಾರೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ
ನಾನು ಸಚಿವರಿಗಿಂತ ಸಂತೋಷವಾಗಿದ್ದೇನೆ, ಅವರಿಗಿಂತ ನಾನು ಬಿಜೆಪಿಯಲ್ಲಿ ಹೆಚ್ಚು ಸರ್ವೀಸ್ ಮಾಡಿದ್ದೇನೆ, ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಹಿಂದೂ ಧರ್ಮದ ಬಗ್ಗೆ ಹೀನಾಮಾನ ಬೈದಿದ್ದರು, ಹಿಂದೂ ಧರ್ಮವನ್ನ ಮನು ಧರ್ಮ, ಜಾತಿ-ಧರ್ಮ ಎಂದು ಎತ್ತಿಕಟ್ಟಿ ಶಾಸಕರಾಗಿದ್ದಾರೆ, ಜನಾಂಗ-ಜನಾಂಗ ಒಡೆದು ಶಾಸಕರಾಗಿ ಬಂದಿದ್ದಾರೆ, ಬಿಜೆಪಿಯವರು ಸೇರಿಸಿಕೊಂಡಿದ್ದಾರೆ, ಹಿಂದೂ ಧರ್ಮ, ವೈದಿಕ ಧರ್ಮವನ್ನ ಬೈದಿದ್ದಕ್ಕೆ ಬಹುಮಾನವಾಗಿ ಮಂತ್ರಿ ಮಾಡುತ್ತಾರೆ ಎಂದೇನಿಲ್ಲ, ನಮ್ಮ ಪಕ್ಷದಲ್ಲಿ ಮಂತ್ರಿ ಮಾಡಲ್ಲ, ಪಕ್ಷಕ್ಕಾಗಿ ದುಡಿದವರು ಮೂವರು ಇದ್ದೇವೆ, ಯಾರನ್ನಾದ್ರು ಮಾಡುತ್ತಾರೆ, ನಾನು ಏನಾದ್ರು ಹೇಳಿಕೆ ಕೊಟ್ರೆ ಪಕ್ಷಕ್ಕೆ ಎಚ್ಚರಿಕೆ ಕೊಟ್ಟಂತಾಗುತ್ತೆ, ಈಗ ಬೇಡ, ಹಿಂದೂ ಧರ್ಮವನ್ನ ಮನು ಧರ್ಮ ಎಂದವರು ಅವರು ಮಂತ್ರಿಯಾಗಲು ನನ್ನ ವಿರೋಧವಿದೆ ಎಂದು ಹೇಳಿಕೆ ನೀಡಿದ್ರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g