April 29, 2024

MALNAD TV

HEART OF COFFEE CITY

ಮೋದಿ ಭಾವಚಿತ್ರ ಅವಮಾನ, ಮಹಿಳೆ ತರಾಟೆ

1 min read

ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಎಲೆ-ಅಡಿಕೆ ಹಾಕಿಕೊಂಡು ಉಗಿದಿದ್ದು ಪ್ರಧಾನಿ ಮೋದಿಗೆ ಅವಮಾನ ಮಾಡಿರುವ ಘಟನೆ ಜಿಲ್ಲೆಯ ಕೊಪ್ಪ-ತೀರ್ಥಹಳ್ಳಿ ತಾಲೂಕಿನ ಗಡಿ ಗ್ರಾಮ ಕುಂಬಗೋಡು ಗ್ರಾಮದಲ್ಲಿ ನಡೆದಿದೆ. ಕುಂಬಗೋಡು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಪಂಡಿತ್ ದೀನಾ ದಯಾಳ್ ಹೆಸರಿನ ಯೋಜನೆಯ ಪ್ರಚಾರಕ್ಕೆಂದು ನಾಮಫಲಕ ಹಾಕಿದ್ದರು. ಅದರಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವಿತ್ತು. ಅದಕ್ಕೆ ಕಿಡಿಗೇಡಿಗಳು ಎಲೆ-ಅಡಿಕೆ ಹಾಕಿಕೊಂಡು ಉಗಿದಿದ್ದರು. ಇದನ್ನ ಕಂಡ ಗ್ರಾಮೀಣ ಮಹಿಳೆ ಮನೆಯಿಂದ ನೀರನ್ನ ತಂದು ಮೋದಿ ಭಾವಚಿತ್ರ ಉಗಿದಿದ್ದನ್ನ ತೊಳೆದಿದ್ದಾರೆ. ಹೀಗೆ ತೊಳೆಯುವಾಗ ಉಗಿದ ಕಿಡಿಗೇಡಿಗಳಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಮೋದಿ ಭಾವಚಿತ್ರಕ್ಕೆ ಉಗಿದ ವ್ಯಕ್ತಿಗೆ ಬಾಯಿಗೆ ಬಂದಂತೆ ಬೈದಿರುವ ಮಹಿಳೆ ಅವರ ಬಾಯಿಗೆ ಮಣ್ಣು ಬಿದ್ದು ಹೋಗಲು. ಅವನು ಸತ್ತು ಹೋಗಲಿ. ಮೋದಿ ಇರುವುದಕ್ಕೆ ನಾವು ಬದುಕಿದ್ದೇವೆ. ಇವರಿಗೆ ಉಗಿಯಲು ಅವನಿಗೆ ಏನು ಬಂದಿತ್ತೋ ಏನೋ ಎಂದು ಕೆಂಡಾಮಂಡಲಳಾಗಿದ್ದಾಳೆ. ಅವನು ಅಂತ ಮಗ, ಇಂತ ಮಗ ಅಂತ ಬೈದಿರೋ ಮಹಿಳೆ ಹೊಟ್ಟೆಗೆ ಅನ್ನ ತಿಂತಾನೋ ಬೇರೆ ತಿಂತಾನೋ ಅವನು ಸಾಯೋದಕ್ಕೆ ಉಗಿದಿರೋದು. ಅವನಿಗೆ ರಾಹು ಹೊಡೆಯಾ ಎಂದು ಹೀನಾಮಾನ ಬೈದಿದ್ದಾಳೆ. ಮಹಿಳೆ ಮನೆಯಿಂದ ತಂದ ನೀರು ಸಾಲದಿದ್ದಾಗ ಮಗಳ ಕೈಲಿ ಮತ್ತೆ ನೀರನ್ನ ತರಿಸಿಕೊಂಡಿದ್ದಾಳೆ. ಎತ್ತರದಲ್ಲಿದ್ದ ಭಾವಚಿತ್ರ ಸಿಗದಿದ್ದಾಗ ಮಹಿಳೆ ಉದ್ದನೆಯ ಕೋಲಿಗೆ ಬಟ್ಟೆ ಸಿಕ್ಕಿಸಿಕೊಂಡು ನಾಮಫಲಕವನ್ನ ನೀಟಾಗಿ ತೊಳೆದಿದ್ದಾಳೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!