ಚುನಾವಣೆ ಹೊಸ್ತಿಲಲ್ಲಿ 2 ದಿನ ಎಂ.ಬಿ.ಪಾಟೀಲ್ ಜಿಲ್ಲಾ ಪ್ರವಾಸ, ಎಲ್ಲೆಲ್ಲಿ ಏನೇನಾಯ್ತು…
1 min read
ನಿನ್ನೆ ಮತ್ತು ಇಂದು ಎರಡು ದಿನಗಳು ಜಿಲ್ಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಬಿರುಸಿನ ಸಭೆ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದರು. ನಿನ್ನೆ ಮಠ ಮಂದಿರಗಳಿಗೆ ಭೇಟಿ ನೀಡಿದ ಅವರು ಇಂದು ಜಿಲ್ಲಾ ಮಟ್ಟದ ಕಾರ್ಯಕರ್ತರ ಹಾಗೂ ಮುಖಂಡರ ಸಮಾವೇಶದಲ್ಲಿ ಭಾಗವಹಿಸಿದ್ದರು.
ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಎಂ ಬಿ ಪಾಟೀಲ್
ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ವ್ಯಂಗ್ಯವಾಡಿದ್ದಾರೆ, ಬಿಜೆಪಿಯವರು ಏನು ಸಾಧನೆ ಮಾಡಿದ್ದಾರೆ ಅಂತಾ ಈ ಕಾರ್ಯಕ್ರಮ ಮಾಡುತ್ತಿದ್ದಾರೆ
ಬೆಂಗಳೂರು ಸ್ವಿಮ್ಮಿಂಗ್ ಫುಲ್ ಆಗಿ ಮಾರ್ಪಟ್ಟಿದೆ ಆದರೆ ಮುಖ್ಯಮಂತ್ರಿ ಬೆಂಗಳೂರು ಪೂರ್ತಿ ಮುಳುಗಿಲ್ಲ ಅಂತಾರೆ ಹಾಗಿದ್ರೆ ಬೆಂಗಳೂರು ಪೂರ್ತಿ ಮುಳುಗಬೇಕಾಗಿತ್ತಾ.? ಎಂದು ಎಂ ಬಿ ಪಿ ಪ್ರಶ್ನೆ ಮಾಡಿದರು
ಜನರಿಗೆ ಏನು ಸ್ಪಂದನೆ ಮಾಡದೇ ಜನಸ್ಪಂದನೆ ಕಾರ್ಯಕ್ರಮ ಮಾಡುತ್ತಿದ್ದೀರಿ ಈ ಸರ್ಕಾರದಿಂದ ಬಡವರಿಗೆ ಒಂದು ಮನೆ ಕಟ್ಟಿಕೊಡುವ ಕೆಲಸ ಆಗಿಲ್ಲ
ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರವನ್ನು ನೀಡಿಲ್ಲ 40% ಭ್ರಷ್ಟಾಚಾರ ಇದು ಜನಸ್ಪಂದನೆ ಕಾರ್ಯಕ್ರಮನಾ.? ಬಿಬಿಎಂಪಿಯಲ್ಲಿ ಇನ್ನು ಹತ್ತು ಪರ್ಸೆಂಟ್ ಜಾಸ್ತಿಯಾಗಿದೆ ಚುನಾವಣೆ ಹತ್ತಿರ ಬಂದಾಗ 65-70 ಪರ್ಸೆಂಟ್ ಗೂ ಹೋಗುತ್ತೆ ಜನ ನಿಮ್ಮನ್ನು ನೋಡಿ ನಗುತ್ತಿದ್ದಾರೆ, ನೀವು ಕಾರ್ಯಕ್ರಮ ಮಾಡುತ್ತಿದ್ದೀರಿ ಈ ರಾಜ್ಯದಲ್ಲಿ ಸರ್ಕಾರವಿಲ್ಲ, ಸುಮ್ಮನೆ ದೂಡಿಕೊಂಡು ಹೋಗುತ್ತಿದ್ದೇವೆ ಎಂದು ಸ್ವತಃ ಸಚಿವ ಮಾಧುಸ್ವಾಮಿಯವರೇ ಹೇಳಿದ್ದಾರೆ
ಎಂದ ಅವರು ನಂತರ ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಭೇಟಿ ನೀಡಿದರು ನಂತರ ಪತ್ರಕರ್ತರೊಂದಿಗೆ ಮಾತನಾಡಿ ನಾವು ಯಾವ ವಿಚಾರದ ಬಗ್ಗೆಯೂ ಚರ್ಚೆ ಮಾಡಿಲ್ಲ. ದಯವಿಟ್ಟು ಯಾವುದೇ ವಿವಾದ ಬೇಡ ಎಂದರು. ಸುಮಾರು ಅರ್ಧಗಂಟೆಗಳ ಕಾಲ ಎಂ.ಬಿ.ಪಾಟೀಲ್ ಹಾಗೂ ರಂಭಾಪುರಿ ಶ್ರೀಗಳು ಮಾತುಕಥೆ ನಡೆಸಿದರು. ಈ ವೇಳೆ, ಅಲ್ಲಿ ಯಾರೂ ಇರಲಿಲ್ಲ. ಎಂ.ಬಿ.ಪಾಟೀಲ್ ಹಾಗೂ ಶ್ರೀಗಳು ಇಬ್ಬರೇ ಇದ್ದರು. ಬಳಿಕ ಮಾತನಾಡಿದ ಎಂ.ಬಿ.ಪಾಟೀಲ್, ನಾವು ಯಾವ ವಿಚಾರದ ಬಗ್ಗೆಯೂ ಚರ್ಚೆ ಮಾಡಿಲ್ಲ. ದಯವಿಟ್ಟು ಯಾವುದೇ ವಿವಾದ ಬೇಡ. ಸೌಹಾರ್ದಯುತವಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ ಅಷ್ಟೆ ಎಂದಿದ್ದಾರೆ. ಸಮಾಜಕ್ಕೆ ಏನು ಬೇಕು, ಸಮಾಜದ ಉನ್ನತಿಗೆ ಏನು ಮಾಡಬೇಕು ಅದನ್ನ ಮಾತನಾಡಿದ್ದೇವೆ ಎಂದರು. ಲಿಂಗಾಯುತ ಒಳ ಪಂಗಡಗಳು ಒಗ್ಗೂಡಬೇಕು. ಮೀಸಲಾತಿ ಸಿಗಬೇಕು ಎಂದರು. ನೆರೆ, ಚಿಕ್ಕಮಗಳೂರು ಸಮಸ್ಯೆ, ಕಸ್ತೂರಿ ರಂಗನ್ ವರದಿ ಬಗ್ಗೆಯೂ ಶ್ರೀಗಳು ಮಾತನಾಡಿದರು ಅಷ್ಟೆ. ಅದನ್ನ ಬಿಟ್ಟು ಬೇರೆ ಏನೂ ಮಾತನಾಡಿಲ್ಲ ಎಂದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g