ರಾಯಚೂರು ಅಂಬೇಡ್ಕರ್ ಫೋಟೋ ವಿವಾದ ಖಂಡಿಸಿ ಫೆ.1.. ರಂದು ನಗರ ಬಂದ್
1 min readಚಿಕ್ಕಮಗಳೂರು: ರಾಯಚೂರಿನ ಕೋರ್ಟ್ ಆವರಣದಲ್ಲಿ ಗಣರಾಜ್ಯೋತ್ಸವದಂದು ಅಂಬೇಡ್ಕರ್ ಭಾವಚಿತ್ರ ತಗೆದರೆ ಮಾತ್ರ ಧ್ವಜಾರೋಹಣ ಮಾಡುವುದಾಗಿ ಹೇಳಿವ ಮೂಲಕ ಡಾ.ಬಿ.ಆರ್ ಆಂಬೇಡ್ಕರ್ ಅವರಿಗೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀ±ರಾದ ಮಲ್ಲಿಕಾರ್ಜುನಗೌಡ ಅವಮಾನ ಮಾಡಿದ್ದು ಖಂಡನೀಯವಾಗಿದ್ದು ಘಟನೆಯನ್ನು ಖಂಡಿಸಿ ಫೆ.1.ರಂದು ಚಿಕ್ಕಮಗಳೂರು ನಗರ ಬಂದ್ಗೆ ವಿವಿಧ ದಲಿತ ಸಂಘಟನೆಗಳು ಕರೆ ನೀಡಿದ್ದು ಸಾರ್ವಜನಿಕರು ಸ್ಪಮದಿಸುವಂತೆ ಮನವಿ ಮಾಡಲಾಯಿತು.
ನಗರದ ಪ್ರೆಸ್ಕ್ಲಬ್ನಲ್ಲಿ ವಿವಿಧ ದಲಿತ ಸಂಘಟನೆಯ ಮುಖಂಡರು ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ ಮುಖಂಡರು ಫೆ.1.ರಂದು ನಗರದ ತಾಲೂಕು ಕಚೇರಿ ಆವರಣದಿಂದ ನಗರದ ಎಂ.ಜಿ ರಸ್ತೆಯ ಮೂಲಕ ಅಜಾದ್ ಪಾರ್ಕ್ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ತಿಳಿಸಿದರು.
ಈ ಕುರಿತಂತೆ ಈಗಾಗಲೇ ಜಿಲ್ಲೆಯ ಎಲ್ಲಾ ದಲಿತ ಮುಖಂಡರ ಜೊತೆ ಚರ್ಚೆನಡೆಸಲಾಗಿದೆ ಎಂದು ತಿಳಿಸಿದರ ಅವರು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಜಿಲ್ಲಾಧ್ಯಕ್ಷರನ್ನು ಭೇಟಿ ಮಾಡಿ ಪಕ್ಷಾತೀತವಾಗಿ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಇನ್ನು ಬಂದ್ ಅನ್ನು ಫೆ.1. ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರಗೆ ನಡೆಸಲು ತೀರ್ಮಾನಿಸಲಾಗಿದ್ದು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದಂತೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ವರ್ತಕರು ಸಹಕರಿಸುವಂತೆ ಅವರ ಜೊತೆಯೂ ಸಹ ಚರ್ಚಿಸಿ ಮನವೊಲಿಸಲಾಗುವುದು ಎಂದು ತಿಳಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g