ಸಿದ್ದಾರ್ಥ ಪ್ರತಿಮೆಗೆ ಶಿವಕುಮಾರ್ ನಮನ
1 min read
ಚಿಕ್ಕಮಗಳೂರು: ಕುದುರೆಗುಂಡಿಯಲ್ಲಿ ನಿರ್ಮಿಸಿರುವ ಸಿದ್ಧಾರ್ಥವನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುರುವಾರ ಭೇಟಿನೀಡಿ, ವನದಲ್ಲಿರುವ ಸಿದ್ಧಾರ್ಥ ಪ್ರತಿಮೆಗೆ ಹಾರಹಾಕಿ ನಮಸ್ಕರಿಸಿದ್ದಾರೆ.
ಸಿದ್ದಾರ್ಥ ಅವರ ಹೆಸರಿನಲ್ಲಿ ವನ ಮತ್ತು ಪ್ರತಿಮೆ ನಿರ್ಮಿಸಲು ಶ್ರಮಿಸಿದ್ದ ಜಿ.ಎಚ್.ಹಾಲಪ್ಪಗೌಡ, ಇತರೆ ಮುಖಂಡರು ಇದ್ದರು.
ಚೀಕನಹಳ್ಳಿ ಸಮೀಪವಿರುವ ಚೇತನಹಳ್ಳಿಯಲ್ಲಿ ಸಿದ್ಧಾರ್ಥ ಅವರ ಮನೆಯಲ್ಲಿ ಕಾರ್ಯವಿದ್ದ ಹಿನ್ನಲೆಯಲ್ಲಿ ಸಿದ್ಧಾರ್ಥ ಕುಟುಂಬ ಹಾಗೂ ಡಿ.ಕೆ.ಶಿವಕುಮಾರ್ ಕುಟುಂಬ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪತ್ನಿ ಪಾಲ್ಗೊಂಡಿದ್ದರೆಂದು ತಿಳಿದುಬಂದಿದೆ.
ಬುಧವಾರ ಸಂಜೆ ಸೆರಾಯ್ನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಶಿವಕುಮಾರ್ ಉಳಿದುಕೊಂಡಿದ್ದರು. ಜಿಲ್ಲಾಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಎಂ.ಎಲ್.ಮೂರ್ತಿ, ಡಾ.ಡಿ.ಎಲ್.ವಿಜಯಕುಮಾರ್,ಜಿಲ್ಲಾ ಪ್ರಧಾನಕಾರ್ಯದರ್ಶಿ ಶಿವಾನಂದಸ್ವಾಮಿ, ಅಕ್ಮಲ್, ರಸೂಲ್ಖಾನ್, ಕಿಸಾನ್ ಕಾಂಗ್ರೆಸ್ ಜಿಲ್ಲಾಕಾರ್ಯದರ್ಶಿ ಎ.ಕೆ.ಪ್ರಕಾಶ್ ಅವರುಗಳನ್ನು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g