May 5, 2024

MALNAD TV

HEART OF COFFEE CITY

ಇದ್ದಕ್ಕಿದ್ದಂತೆ ಮನೆಗಳಿಗೆ ಬೆಂಕಿ, ಆತಂಕದಲ್ಲಿ ಶೃಂಗೇರಿಯ ಹುಳುವಳ್ಳಿ ಜನ

1 min read

ಹಗಲಿರುಳೆನ್ನದೆ ಇದ್ದಕ್ಕಿದ್ದಂತೆ ಮನೆಗಳಿಗೆ ಬೆಂಕಿ ಹತ್ತುತ್ತಿದ್ದು ಸ್ಥಳಿಯರು ಬೆಂಕಿ ಅಂದ್ರೆ ಭಯಬೀಳುವಂತಹಾ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ನಡೆದಿದೆ. ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳುವಳ್ಳಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳ ಅಂತರದಲ್ಲಿ ಹಗಲಿರುಳೆನ್ನದೆ ಇದ್ದಕ್ಕಿದ್ದಂತೆ ಮೂರು ಮನೆಗಳು ಬೆಂಕಿಗಾಹುತಿಯಾಗಿದೆ. ಇಂದು ಕೂಡ ಕೊರನಕೂಡಿಗೆ ಗ್ರಾಮದ ಮನ್ಸೂರ್ ಎಂಬುವರ ಮನೆಗೆ ನಡುಮಧ್ಯಾಹ್ನವೇ ಬೆಂಕಿ ಬಿದ್ದಿದೆ. ಸ್ಥಳಿಯರು ಕೂಡಲೇ ಬೆಂಕಿ ನಂದಿಸಿದರೂ ಕೂಡ ಮನೆಯ ಹಿಂಭಾಗದಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ.  

 

ಮನೆಯಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೆ ಇದೇ ಗ್ರಾಮದ ಕಿರಣ್ ಆಚಾರ್ಯ ಎಂಬುವರ ಬೈಕಿಗೂ ಬೆಂಕಿ ಹಚ್ಚಿದ್ದರು. ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಇದಾದ ಒಂದೆರಡು ದಿನದಲ್ಲೇ ಸಂತೋಷ್ ಎಂಬುವರ ಮನೆಗೂ ಬೆಂಕಿ ಹಚ್ಚಿದ್ದರು. ಇದೀಗ ಮನ್ಸೂರ್ ಎಂಬುವರ ಮನೆಗೆ ಬೆಂಕಿ ತಗುಲಿದ್ದು 15 ದಿನಗಳ ಅಂತರದಲ್ಲಿ ಮೂರು ಮನೆಗಳು ಬೆಂಕಿಗಾಹುತಿಯಾಗಿವೆ. ಮೇಲಿಂದ ಮೇಲೆ ಇಂತಹಾ ಪ್ರಕರಣ ನಡೆಯುತ್ತಿರುವುದರಿಂದ ಸ್ಥಳಿಯರು ಕೂಡ ಆತಂಕಕ್ಕೀಡಾಗಿದ್ದಾರೆ. ಇದು ಯಾರೋ ಕಿಡಿಗೇಡಿಗಳು ಬೇಕು ಎಂದು ಮಾಡುತ್ತಿರುವ ಕೆಲಸ ಎಂದು ಸ್ಥಳಿಯರು ಶೃಂಗೇರಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಿ, ಆರೋಪಿಗಳನ್ನ ಕೂಡಲೇ ಬಂಧಿಸಿ ಮನೆಗೆ ಬೆಂಕಿ ಬೀಳುವ ಘಟನೆಗಳನ್ನ ನಿಲ್ಲಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!