ಈ ದೇಶದಲ್ಲಿ ಗಾಂಧಿ ಕುಟುಂಬ-ಜನಸಾಮಾನ್ಯರಿಗೊಂದು ಕಾನೂನು-ಸಂವಿಧಾನ ಇಲ್ಲ : ಆರಗ ಜ್ಞಾನೇಂದ್ರ
1 min read
ಚಿಕ್ಕಮಗಳೂರು: ಬಹಳ ಸೆಕ್ಯುಲರಿಸ್ಟ್ಗಳ ರೀತಿ ಮಾತನಾಡುತ್ತಾರೆ. ಭಾಷಣ ಮಾಡುತ್ತಾರೆ. ಈಗ ಜಾತಿಗೆ ಜೋತು ಬಿದ್ದಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್-ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ತಿಂಡಿ ತಿನ್ನುವ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಕ್ಕಲಿಗರ ಮತ ನಮಗೆ-ನಮಗೆ ಎನ್ನುತ್ತಿರುವ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಲೇವಡಿ ಮಾಡಿದ್ದಾರೆ. ಅವರು ಬಹಳ ಸೆಕ್ಯುಲರಿಸ್ಟ್ಗಳ ರೀತಿ ಮಾತನಾಡುತ್ತಾರೆ. ಭಾಷಣ ಮಾಡುತ್ತಾರೆ. ಈಗ ಜಾತಿಗೆ ಜೋತು ಬಿದ್ದಿರೋದು ದುರಂತ ಎಂದರು. ತತ್ವ-ಸಿದ್ದಾಂತ ಏನೂ ಇಲ್ಲದವರು. ಈಗ ಜಾತಿಗೆ ಜೋತು ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ, ಸೋನಿಯಾ ಗಾಂಧಿ ಇಡಿ ವಿಚಾರಣೆ ಎದುರಿಸುತ್ತಿರುವುದಕ್ಕೆ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧವೂ ಅವರು ಅಸಮಾಧಾನ ಹೊರಹಾಕಿದ್ದಾರೆ. ಈ ದೇಶದಲ್ಲಿ ಗಾಂಧಿ ಮನೆತನಕ್ಕೆ ಒಂದು ಸಂವಿಧಾನ-ಕಾನೂನು. ಬೇರೆಯವರಿಗೆ ಒಂದು ಸಂವಿಧಾನ-ಕಾನೂನು ಇಲ್ಲ. ಎಲ್ಲರಿಗೂ ಒಂದೇ ಇರೋದು. ಇ.ಡಿ. ತನಿಖೆ ಯಾವ ಕಾರಣಕ್ಕೆ ನಡೆಯುತ್ತಿದೆ ಎಂದು ಇಡೀ ಜಗತ್ತಿಗೆ ಗೊತ್ತಿದೆ. ನ್ಯಾಷನಲ್ ಹೇರಾಲ್ಡ್ ಪತ್ರಿಕೆಯದ್ದು ಓಪನ್ ಸೀಕ್ರೆಟ್. ಅವರು ಏನು ಮಾಡಿದ್ದಾರೆ ಅದರ ಬಗ್ಗೆ ತನಿಖೆ ನಡೆಯುತ್ತಿದೆ. ನಮ್ಮನ್ನ ಮುಟ್ಟಬಾರದು,
ನಮ್ಮನ್ನ ತನಿಖೆಗೆ ಕರೆಯಬಾರದು ಅನ್ನೋದು ಏನರ್ಥ ಎಂದರು. ದೂರು ನೀಡಿದರೆ ಸಾಮಾನ್ಯ ಮನುಷ್ಯರನ್ನ ಪೊಲೀಸರು ಕರೆದುಕೊಂಡು ಹೋಗಿ ತನಿಖೆ ನಡೆಸುತ್ತಾರೆ. ಇಡೀ ದೇಶದಲ್ಲಿ ಅದೊಂದು ವ್ಯವಸ್ಥೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ. ಅವರ ಮಾತು ಮಾತಿಗೆ ಅರ್ಥವೇ ಇಲ್ಲ ಎಂದು ಪ್ರತಿಭಟನಾಕಾರ ವಿರುದ್ಧ ಲೇವಡಿ ಮಾಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g