ಕಣದಲ್ಲಿ ಒಣ ಹಾಕಿದ ಕಾಫಿಗೆ ಕಳ್ಳರ ಕಾಟ
1 min readಕೊಟ್ಟಿಗೆಹಾರ:ಕಾಫಿಗೆ ಉತ್ತಮ ಬೆಲೆ ಬರುತ್ತಿದಂತೆ ಮಲೆನಾಡು ಭಾಗದಲ್ಲಿ ಕಣದಲ್ಲಿ ಒಣ ಹಾಕಿದ ಕಾಫಿಗೆ ಕಳ್ಳರ ಕಾಟ ಪ್ರಾರಂಭವಾಗಿದ್ದು ಮಾಲಿಂಗನಾಡಿನಲ್ಲಿ ಕಣದಲ್ಲಿ ಒಣ ಹಾಕಿದ ಕಾಫಿಯನ್ನು ಕಳವು ಮಾಡಲಾಗಿದೆ.
ಮಾಲಿಂಗನಾಡಿನ ಕಾಫಿ ಬೆಳೆಗಾರರಾದ ಕಾರ್ತಿಕ್ ಎಂಬುವವರ ಮನೆಯ ಮುಂದಿನ ಕಣದಲ್ಲಿ ಒಣ ಹಾಕಿದ ಕಾಫಿಯನ್ನು ಕಳವು ಮಾಡಲಾಗಿದ್ದು ಬಾಳೂರು ಪೊಲೀಸರು ಕಾಫಿ ಕಳವು ಮಾಡಿದ ಆರೋಪಿ ಮಾಲಿಂಗನಾಡಿನ ಜಯಪಾಲ ಎಂ.ಎಂ ಎಂಬುವವನನ್ನು ಬಂಧಿಸಿದ್ದಾರೆ. ಆರೋಪಿ ಜಯಪಾಲ ರಾತ್ರಿ ಸಮಯದಲ್ಲಿ ಕಾರ್ತಿಕ್ ಅವರ ಮನೆಯ ಮುಂಭಾಗದ ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯನ್ನು ಕಳವು ಮಾಡುವ ಸಂದರ್ಭದಲ್ಲಿ ಕಾರ್ತಿಕ್ ಮನೆಯವರು ಹೊರ ಬಂದು ನೋಡಿದಾಗ ಕದ್ದ ಕಾಫಿಯೊಂದಿಗೆ ಆರೋಪಿ ಪರಾರಿಯಾಗಿದ್ದಾನೆ. ಬಾಳೂರು ಪೊಲೀಸರು ಆರೋಪಿ ಜಯಪಾಲನನ್ನು ಬಂದಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಾರುಕಟ್ಟೆಯಲ್ಲಿ ಕಳೆದ ವರ್ಷ ಸುಮಾರು 3 ಸಾವಿರವಿದ್ದ ರೋಬಾಸ್ಟಾ ಚೆರಿಯ ಬೆಲೆ 4200 ಆಗಿದ್ದು 10 ಸಾವಿರವಿದ್ದ ಅರೇಬಿಕಾ ಪಾರ್ಚ್ಮೆಂಟಿನ ಬೆಲೆ 15 ಸಾವಿರವಾಗಿದೆ. 5 ಸಾವಿರವಿದ್ದ ಅರೇಬಿಕಾ ಚೆರಿಯ ಬೆಲೆ 7 ಸಾವಿರವಾಗಿದ್ದು 5 ಸಾವಿರವಿದ್ದ ರೋಬಾಸ್ಟಾ ಪಾರ್ಚ್ಮೆಂಟಿನ ಬೆಲೆ 7 ಸಾವಿರವಾಗಿದೆ. ಕಾಫಿಯ ಬೆಲೆ ಏರುತ್ತಿದ್ದಂತೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಣದಲ್ಲಿ ಒಣ ಹಾಕಿದ್ದ ಕಾಫಿಯನ್ನು ಹಗಲು ರಾತ್ರಿ ಎನ್ನದ್ದೇ ಕಾಯುವ ಕೆಲಸ ಕಾಫಿ ಬೆಳೆಗಾರರದಾಗಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g