ಪೊಲೀಸ್ ಇಲಾಖೆ ವಿರುದ್ಧರೈತರ ಪ್ರತಿಭಟನೆ
1 min readಪೊಲೀಸ್ ಇಲಾಖೆ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಭಾವಿ ಗಳ ಕುಮ್ಮಕ್ಕಿನಿಂದ ಕರ್ತವ್ಯಲೋಪ ಎಸಗುತ್ತಿದ್ದಾರೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಬರು ವ ಬಡವರು, ರೈತರು, ಕಾರ್ಮಿಕರಿಗೆ ನ್ಯಾಯ ಸಿಗದಂತಾಗಿದೆ ಎಂದು ಆರೋಪಿಸಿ ಕರ್ನಾ ಟಕ ರಾಜ್ಯ ರೈತ ಸಂಘದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡ ರೈತಸಂಘದ ಮುಖಂಡರು ಪೊಲೀಸ್ ಇಲಾಖೆಯಲ್ಲಿರುವ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಪೊಲೀಸ್ ಇಲಾಖೆಗೆ ಉತ್ತಮ ಹೆಸರಿದೆ. ಆದರೆ ಗೃಹ ಇಲಾಖೆ ಸಚಿವರು ತಮ್ಮ ಹೊಣೆ ಸರಿಯಾಗಿ ನಿರ್ವಹಿಸದಿರುವರಿಂದ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿದೆ ಎಂದರು.ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಇದ್ದರು ಕೆಲ ಭ್ರಷ್ಟ ಅಧಿಕಾರಿಗಳ ಕರ್ತವ್ಯಲೋಪದಿಂದ ಇಡೀ ಪೊಲೀಸ್ ಇಲಾಖೆಗೆ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಮೂಡುತ್ತಿದೆ ಎಂದು ದೂರಿದರು.ಚಿಕ್ಕಮಗಳೂರು ಪೊಲೀಸ್ ಉಪವಿಭಾಗದಲ್ಲಿ ಉಪಾಧೀಕ್ಷಕರ ಕಚೇರಿ ಅಧಿಕಾರಿಗಳು 2017 ನೇ ಸಾಲಿನ ಸ್ವೀಕೃತಿ ಮತ್ತು ರವಾನೆ ರಿಜಿಸ್ಟರ್ ನಿರ್ವಹಣೆ ಮಾಡಿಲ್ಲ. ಈ ಸಂಬAಧ ಹಿರಿಯ ಪೊಲೀಸ್ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂ ದರು.
ಸ್ವೀಕೃತಿ ಮತ್ತು ರವಾನೆ ರಿಜಿಸ್ಟರ್ ನಿರ್ವಹಣೆ ಮಾಡದಿರಲು ಕಾರಣ ಏನೆಂಬ ಬಗ್ಗೆ ಪೊಲೀಸ್ ಇಲಾಖೆ ತನಿಖೆಗೂ ಮುಂದಾಗುತ್ತಿಲ್ಲ. ಚಿಕ್ಕಮಗಳೂರು ಪೊಲೀಸ್ ಉಪ ವಿಭಾಗದಲ್ಲಿ ಉಪಾಧೀಕ್ಷಕರ ಕಚೇರಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ವ್ಯಾಪಕ ಸಂಶ ಯಕ್ಕೆ ಕಾರಣವಾಗಿದೆ ಎಂದರು.
ಸ್ವೀಕೃತಿ, ರವಾನೆ ರಿಜಿಸ್ಟರ್ ನಿರ್ವಹಣೆ ಬಗ್ಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ನೀಡಿರುವ ವರದಿ ಅಸಮರ್ಪಕ ಎಂದು ವರದಿಯನ್ನು ತಿರಸ್ಕರಿಸಿ, ಸುಳ್ಳುವರದಿ ಎಂದು ಪರಿಗಣಿ ಸಬೇಕು. ಪೊಲೀಸ್ ಇಲಾಖೆಯ ಸ್ವೀಕೃತಿ, ರವಾನೆ ರಿಜಜಿಸ್ಟರ್ ನಲ್ಲಿರುವ ಸೀಲು, ಸಹಿಗಳು ಪೊಲೀಸ್ ಅಧಿಕಾರಿಗಳದ್ದೇ ಎಂಬ ಬಗ್ಗೆ ಪ್ರಾಮಾಣಿಕ ಅಧಿಕಾರಿಗಳಿಂದ ತನಿಖೆಗೆ ಒಳಪಡಿ ಸಬೇಕು. ಇಲಾಖೆ ಅಧಿಕಾರಿಗಳು ಪೊಲೀಸ್ ಇಲಾಖೆಯ ಆಡಳಿತದಲ್ಲಿನ ಲೋಪಗಳನ್ನು ಸರಿಪಡಿಸಿ ಇಲಾಖೆಯನ್ನು ಜನಸ್ನೇಹಿಯನ್ನಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತಸಂಘ ದ ಮುಖಂಡರಾದ ಮಂಜುನಾಥ್ಗೌಡ, ಲಕ್ಷö್ಮಣ್ಗೌಡ, ಕೆ.ಕೆ.ಕೃಷ್ಣೇಗೌಡ, ಬಿ.ಡಿ.ಮಹೇಶ್, ಪುಟ್ಟಸ್ವಾಮಿಗೌಡ, ಆನಂದ್, ವನಶ್ರೀ, ಸುರಭಿ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g