May 19, 2024

MALNAD TV

HEART OF COFFEE CITY

ಸುಪ್ರಭಾತಕ್ಕೆ ಹೋಗುತ್ತಿದ್ದ ಶ್ರೀರಾಮಸೇನೆ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ 

1 min read

 

 

ಚಿಕ್ಕಮಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನ ಶ್ರೀರಾಮಸೇನೆ ಕಾಯಕರ್ತರು ರಕ್ಷಿಸಿರುವ ಘಟನೆ ನಗರದ ಶಂಕರಪುರದಲ್ಲಿ ನಡೆದಿದೆ. ರಾಜ್ಯದಲ್ಲಿ ಆಜಾನ್ ವರ್ಸಸ್ ಸುಪ್ರಭಾತ ಅಭಿಯಾನ ಆರಂಭವಾಗಿರುವ ಹಿನ್ನೆಲೆ ಶ್ರೀರಾಮಸೇನೆ ಕಾರ್ಯಕರ್ತರು ಇಂದು ಕೂಡ ಬೆಳಗ್ಗೆ 5 ಗಂಟೆಗೆ ಮುಸ್ಲಿಮರು ಬಾಂಗ್ ಕೂಗುವ ವೇಳೆ ದೇವಸ್ಥಾನದಲ್ಲಿ ಸುಪ್ರಭಾತ ಹಾಕಲು ಮುಂದಾಗಿದ್ದರು. ಆದರೆ, ಈ ವೇಳೆ, ಸುಪ್ರಭಾತ ಹಾಕಲು ದೇವಸ್ಥಾಣಕ್ಕೆ ಹೋಗುವ ಸಂದರ್ಭದಲ್ಲಿ ಲಗೇಜ್ ಆಟೋದಲ್ಲಿ ಗೋವುಗಳನ್ನ ಸಾಗಿಸುತ್ತಿರುವುದು ಶ್ರೀರಾಮಸೇನೆ ಕಾರ್ಯಕರ್ತರ ಗಮನಕ್ಕೆ ಬಂದಿದೆ. ಕೂಡಲೇ ಶ್ರೀರಾಮಸೇನೆ ಕಾರ್ಯಕರ್ತರು ಗೋವನ್ನ ರಕ್ಷಿಸಿ, ಅಕ್ರಮವಾಗಿ ಗೋವನ್ನ ಸಾಗಿಸುತ್ತಿದ್ದವರನ್ನ ಪೊಲೀಸರಿಗೆ ನೀಡಿದ್ದಾರೆ. ಶ್ರೀರಾಮಸೇನೆ ಕಾರ್ಯಕರ್ತರು ನಗರದ ಶಂಕರಪುರದಲ್ಲಿರುವ ಕೊಂಗನಾಟಮ್ಮ ದೇವಾಲಯದಲ್ಲಿ ನಿನ್ನೆಯಿಂದಲೂ ದಿನಕ್ಕೆ ಮೂರು ಬಾರಿ ಸುಪ್ರಭಾತ ಹಾಕುತ್ತಿದ್ದಾರೆ.

ಇಂದು ಬೆಳಗ್ಗೆ ಸುಪ್ರಭಾತಕ್ಕೆ ಹೋಗುವಾಗ ನಗರದ ಗೌಡನಹಳ್ಳಿಯ ವ್ಯಕ್ತಿಯೊಬ್ಬ ಎಲ್ಲಿಂದಲೋ ಹಾಲು ಕೊಡುವ ಹಸು ಹಾಗೂ ಕರುವನ್ನ ಕದ್ದು ತಂದು ಕಸಾಯಿಖಾನೆ ನೀಡಿದ್ದನು. ಇದನ್ನ ಗಮನಿಸಿದ ಶ್ರೀರಾಮಸೇನೆ ಕಾರ್ಯಕರ್ತರು ಕೂಡಲೇ ಅಲ್ಲಿಗೆ ಹೋಗಿ ಪ್ರಶ್ನಿಸಿದಾಗ ಒಬ್ಬೊಬ್ಬರಿಗೆ ಒಂದೊಂದು ಉತ್ತರ ಕೊಟ್ಟು ತಡವರಿಸಿದ್ದಾನೆ. ಕೂಡಲೇ ಶ್ರೀರಾಮಸೇನೆ ಕಾರ್ಯಕರ್ತರು ಹಸು-ಕರುವನ್ನ ತಂದು ದೇವಸ್ಥಾನದ ಬಳಿ ಕಟ್ಟಿ ಗಾಡಿಯನ್ನ ತಂದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆತನನ್ನ ಕರೆದುಕೊಂಡು ಹೋಗಿದ್ದಾರೆ. ಕದ್ದು ತಂದಿದ್ದ ಹಸುವನ್ನ ನಗರದ ಇಂದಾವರ ಗ್ರಾಮದಲ್ಲಿರುವ ಕಾಮಧೇನು ಗೋಶಾಲೆಗೆ ಬಿಟ್ಟಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!