ಜಗನ್ನಾಥರಾವ್ ಜೋಶಿ ಮಹಾಶಕ್ತಿ ಕೇಂದ್ರದಿಂದ ಅರ್ಥಪೂರ್ಣ ಅಂಬೇಡ್ಕರ್ ಜಯಂತಿ ಆಚರಣೆ
1 min readಚಿಕ್ಕಮಗಳೂರು: ಕಾಂಗ್ರೆಸ್ ಮಾಡಿದ ಮೋಸಗಳನ್ನು ದಲಿತರು ನೆನಲಿಸಿಕೊಂಡ್ರೆ ದಲಿತರು ಕಾಂಗ್ರೆಸ್ ಕಡೆ ತಿರುಗಿಯೂ ನೋಡಬಾರದು ಎಂದು ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಜಗನ್ನಾಥರಾವ್ ಜೋಷಿ ಶಕ್ತಿ ಕೇಂದ್ರದ ವಾರ್ಡ್ ನಂ 11,12,13,22,20ರ ವತಿಯಿಂದ ನಗರದ ಶಂಕರಪುರದಲ್ಲಿ 131ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾವೆಲ್ಲರೂ ನಾಯಕರಾಗಲು ಅಂಬೇಡ್ಕರ್ ಕಾರಣ, ಕಾಂಗ್ರೆಸ್ ಅಲ್ಲ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ಗೆ ಅವರ ಭಾವಚಿತ್ರವನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಲು ಹಾಗೂ ಅವರ ಹೆಸರು ಹೇಳಲು ನೈತಿಕತೆ ಇಲ್ಲ ಎಂದರು.ಇಷ್ಟು ವರ್ಷಗಳ ಕಾಲ ದಲಿತರು ಯಾವುದೇ ಉನ್ನತ ಹುದ್ದೆಯನ್ನು ಅನುಭವಿಸಿಲ್ಲ. ಆದರೆ ದಲಿತರನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕೂರಿಸಲು ಮೋದಿ ಅಂತಹವರು ಬೇಕಾಯ್ತು. ಕಾಂಗ್ರೆಸ್ ಇಷ್ಟು ವರ್ಷದಲ್ಲಿ ಒಬ್ಬ ದಲಿತ, ಒಬ್ಬ ಮುಸ್ಲೀಂರನ್ನು ಉನ್ನತ ಸ್ಥಾನದಲ್ಲಿ ಕೂರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಲ್ಲಿಯೂ ಈ ವರೆಗೆ ಒಮ್ಮೆಯೂ ನಗರಸಭೆ ಅಧ್ಯಕ್ಷಸ್ಥಾನದಲ್ಲಿ ದಲಿತರನ್ನು ಕಾಂಗ್ರೆಸ್ ಕೂರಿಸಿಲ್ಲ. ಆದರೆ ಆ ಕೀರ್ತಿ ಬಿಜೆಪಿ ಹಾಗೂ ಶಾಸಕ ಸಿ.ಟಿ ರವಿ ಅವರಿಗೆ ಸಲ್ಲುತ್ತದೆ ಎಂದರು.ಇನ್ನು ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಹಲವರು ಮಾತನಾಡಿ ಅಂಬೇಡ್ಕರ್ ಆಶಯಗಳನ್ನು ಜನರಿಗೆ ತಿಳಿಸಿದರು.
. ಕಾರ್ಯಕ್ರಮದಲ್ಲಿ.ನಗರಸಭೆಯ ಉಪಾಧ್ಯಕ್ಷರು ಉಮಾದೇವಿ ಕೃಷ್ಣಪ್ಪ ಮತ್ತು ಮಾಜಿ ನಗರಸಭೆ ಅಧ್ಯಕ್ಷ ಮುತ್ತಯ್ಯ ಮತ್ತು ಮಾಜಿ ನಗರಸಭೆ ಸದಸ್ಯರು ನರಸಿಂಹ ಮತ್ತು ಓಬಿಸಿ ಮುಖಂಡ ಜಿ ಶಂಕರ್ ಮತ್ತು ಮುಖ್ಯ ಅತಿಥಿ ರೀನೇಶ್ ವಕೀಲರು ಮತ್ತು ವಿಜಯಕುಮಾರ್ ಬಿಜೆಪಿ ಯುವ ಮುಖಂಡ ಹಾಗೂ ಅವರ ತಂಡ ಮತ್ತು ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ SDM ಮಂಜು ಮತ್ತು ರವಿ ಕೆ ಮತ್ತು ಬಿಜೆಪಿಯ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g