May 6, 2024

MALNAD TV

HEART OF COFFEE CITY

ಕರ್ತವ್ಯದ ವೇಳೆ ಸಿನಿಮಾ ವೀಕ್ಷಣೆ, ಕಾಂಗ್ರೆಸ್ ಪ್ರತಿಭಟನೆ

1 min read

 

 

ಚಿಕ್ಕಮಗಳೂರು.: ವಿದ್ಯಾರ್ಥಿಗಳು ಮಾಸ್ ಬಂಕ್ ಹಾಕಿ ಸಿನಿಮಾಗೆ ಹೋಗೋದು ಕಾಮನ್. ಆದರೆ, ಕಾಫಿನಾಡಲ್ಲಿ ಅಧಿಕಾರಿಗಳು ಕಚೇರಿಗೆ ಮಾಸ್ ಬಂಕ್ ಹಾಕಿ ಸಿನಿಮಾಗೆ ಹೋಗಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಘಟನೆ ನಗರದ ನಗರಸಭೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಎಂದಿನಂತೆ ಕಚೇರಿಗೆ ಬಂದ ಅಧಿಕಾರಿಗಳು ಹಾಗೂ ಅರೆಕಾಲಿಕ ನೌಕರರೆಲ್ಲರೂ ಶ್ರೀಲೇಖಾ ಥಿಯೇಟರ್‍ಗೆ “ದಿ ಕಾಶ್ಮೀರಿ ಫೈಲ್ಸ್” ಚಿತ್ರ ನೋಡಲು ಹೋಗಿದ್ದಾರೆ. ಹೀಗೆ ಸಿನಿಮಾಗೆ ಹೋಗುವ ಮುನ್ನ ಹಾಜರಾತಿಗೆ ಸಹಿ ಹಾಕುವುದ ಮರೆತಿಲ್ಲ. ವಿಷಯ ತಿಳಿದ ಜಿಲ್ಲಾ ಕಾಂಗ್ರೆಸ್ ನಗರಸಭೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಇಡೀ ನಗರಸಭೆ ಖಾಲಿಯಾಗಿದೆ. ನಗರಸಭೆಯಲ್ಲಿ ಓರ್ವ ಸಿಬ್ಬಂದಿ ಕೂಡ ಇಲ್ಲ. ಎಲ್ಲರೂ ಸಹಿ ಹಾಕಿ ಸಿನಿಮಾಗೆ ಹೋದರೆ ಜನಸಾಮಾನ್ಯ ಕೆಲಸ ಮಾಡಿಕೊಡುವವರು ಯಾರೆಂದು ಪ್ರಶ್ನಿಸಿದ್ದಾರೆ. ಇವರು ಸಿನಿಮಾ ನೋಡುವುದಾದರೆ ಹೋಗಲಿ ಯಾರೂ ಬೇಡ ಅನ್ನುವುದಿಲ್ಲ. ಭಾನುವಾರ ಎಲ್ಲರೂ ಹೋಗಲಿ. ಅಥವ, ಸಂಜೆ ಆರು ಗಂಟೆಯ ಫಸ್ಟ್ ಶೋಗೆ ಎಲ್ಲರೂ ಹೋಗಲಿ. ಕೇಳೋರು ಯಾರೂ ಇಲ್ಲ. ಆದರೆ, ಅದನ್ನ ಬಿಟ್ಟು ಸರ್ಕಾರಿ ಅಧಿಕಾರಿಗಳಾಗಿ ಎಲ್ಲರೂ ಹೀಗೆ ಕಚೇರಿಗೆ ಬಂದು ಸಹಿ ಹಾಕಿ ಸಿನಿಮಾಗೆ ಹೋದರೆ ಜನರ ಕೆಲಸ ಮಾಡುವವರು ಯಾರು, ನಗರಸಭೆ ಉದ್ದೇಶ ಏನೆಂದು ಪ್ರಶ್ನಿಸಿ ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಗರಸಭೆಯಲ್ಲಿದ್ದ ಅಟೆಂಡರ್‍ಗಳು ಕಂದಾಐ ವಸೂಲಿಗೆ ಹೋಗಿದ್ದಾರೆ ಎಂದು ಹೇಳಿದ್ದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಅಟೆಂಡರ್‍ಗಳನ್ನ ಬಿಟ್ಟು ಎಲ್ಲರೂ ಕಂದಾಯ ವಸೂಲಿಗೆ ಹೋಗಿದ್ದಾರೆ. ಅವರು ಕಂದಾಯ ವಸೂಲಿಗೆ ಹೋಗಿಲ್ಲ. ಶ್ರೀಲೇಖಾ ಥಿಯೇಟರ್‍ನಲ್ಲಿ ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ನೋಡುತ್ತಿದ್ದಾರೆ. ನಗರಸಭೆ ಅತ್ಯಂತ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ, ತೆರಿಗೆ ಹಣವನ್ನ ನೇರವಾಗಿ ಲೂಟಿ ಮಾಡುತಿದೆ ಎಂದು ಆಕ್ರೋಶ ಹೊರಹಾಕಿ, ಜಿಲ್ಲಾಧಿಕಾರಿಗೆ ಈ ಬಗ್ಗೆ ದೂರು ನೀಡಲು ಮುಂದಾದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!