ಆರೋಪಿಗೆ… ಪೋಷಕರ ಸ್ಥಾನದಲ್ಲಿ ನಿಂತು ಆರೈಕೆ ಮಾಡಿದ ಖಾಕಿ…!
1 min readಚಿಕ್ಕಮಗಳೂರು : ಫೈರಿಂಗ್ ಮಾಡಿದ ತಪ್ಪಿಗೆ ಹೇಗೆ ಹೆತ್ತವರು, ಕಟ್ಕೊಂಡ್ ಹೆಂಡ್ತಿ ತರ ಪೊಲೀಸರೇ ಆಸ್ಪತ್ರೆಯಲ್ಲಿ ಆರೋಪಿಗೆ ಹಾರೈಕೆ ಮಾಡ್ತಿದ್ದಾರೆ ನೋಡಿ. ಇನ್ನು ಈತನ ಹೆಸ್ರು ಪೂರ್ಣೇಶ್. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದವನು. ಈತ ಒಂದು ರೀತಿ ಖಾಂಡ್ಯದ ರೌಡಿ. ಈತನ ಮೇಲೆ 4 ಹಾಫ್ ಮರ್ಡರ್, 3 ಅಸಾಲ್ಟ್, ಪೊಲೀಸ್ ಮೇಲೆ ಅಟ್ಯಾಕ್ ಸೇರಿದಂತೆ 9 ಕೇಸ್ಗಳಿದ್ವು. 307 ಕೇಸಲ್ಲಿ ವಾರಂಟ್ ಕೂಡ ಇಶ್ಯು ಆಗಿತ್ತು. ಆದ್ರೆ, 2012ರಿಂದ ಕಾಡಲ್ಲಿ, ಕಾಡಿನ ಮರಗಳ ಮೇಲೆ ಮಲಗಿ ಪೊಲೀಸರ ಕೈಗೆ ಸಿಗದೆ ಆಟ ಆಡಿಸ್ತಿದ್ದ. ಲಾಸ್ಟ್ ವೀಕ್ ಮನೆಯಲ್ಲಿರೋ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್ ಬೀಸಿದ ಅಂತ ಕಾಲಿಗೆ ಮಂಡಿಗೆ ಫೈರಿಂಗ್ ಮಾಡಿದ್ದರು. ಆದ್ರೆ, ಫೈರಿಂಗ್ ಆದ ಮೇಲೆ ಆತನನ್ನ ನೋಡಿಕೊಳ್ಳಲು ಅವರ ಮನೆಯವರು ಯಾರೂ ಬಾರದ ಕಾರಣ ಓರ್ವ ಇನ್ಸ್ಪೆಕ್ಟರ್, ಓರ್ವ ಪಿ.ಎಸ್.ಐ. ಹಾಗೂ ನಾಲ್ವರು ಪೇದೆಗಳೇ ಆತನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ವಾರದಿಂದ ಆಸ್ಪತ್ರೆಯಲ್ಲಿರೋ ಪೊಲೀಸರಿಗೆ ಎಂಟತ್ತು ವರ್ಷಳಿಂದ ಸಿಕ್ಕಿರಲಿಲ್ಲ. ಸಿಕ್ಕಿಲ್ಲ ಅಂತ ರಿಪೋರ್ಟ್ ಹಾಕಿದ್ರೆ ಆಗೋದು. ಶೂಟ್ ಮಾಡಿ ಈಗ ನಾವೇ ನೋಡಿಕೊಳ್ಳೊ ಸ್ಥಿತಿ ಬಂದಿದೆ ಅನ್ನಿಸಿರೋದಂತು ಸುಳ್ಳಲ್ಲ.
ಫೈರಿಂಗ್ ಆಗಿದೆ ಅಂತ ಗೊತ್ತಾದ ಮೇಲೂ ಪೋಷಕರು, ಸಂಬಂಧಿಕರು, ಹೆಂಡ್ತಿ-ಮಕ್ಕಳು ಯಾರೂ ಬಂದಿಲ್ಲ. ಶೂಟ್ ಮಾಡಿ ಆಸ್ಪತ್ರೆಗೆ ಸೇರಿಸಿದ್ದ ಪೊಲೀಸರಿಗೆ ವೈದ್ಯರು ವೆಸಲ್ ಕಟ್ ಆಗಿದೆ ಅಂತ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ರೆಫರ್ ಮಾಡಿದ್ದರು. ಮನೆಯವರಿಗೆ ವಿಷಯ ತಿಳಿದರೂ ಯಾರೂ ಬಾರದ ಕಾರಣ ಸಿಪಿಐ, ಪಿಎಸ್ಐ ಹಾಗೂ ನಾಲ್ವರು ಪೇದೆಗಳೇ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ರು. ಆತನನ್ನ ಬೆಂಗಳೂರಿನ ಆಸ್ಪತ್ರೆಗೂ ಕರೆದೊಯ್ದಿರು ಪೋಷಕರು, ಸಂಬಂಧಿಕರು ಹೆಂಡ್ತಿ-ಮಕ್ಕಳು ಯಾರು ಬಂದಿಲ್ಲ. ಇದೀಗ, ವಾರದಿಂದ ನೋಡಿಕೊಂಡ ಪೊಲೀಸರೇ ಆಪರೇಷನ್ ಮಾಡಿಸಿ, ಪೋಷಕರ ಸ್ಥಾನದಲ್ಲಿ ನಿಂತು ಹಾರೈಕೆ ಮಾಡುತ್ತಿದ್ದಾರೆ. ಸಿಪಿಐ, ಪಿಎಸ್ಐ, ಪೇದೆಗಳು ಇಂದಿಗೂ ಆತನ ಹಾರೈಕೆಯಲ್ಲಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g