April 28, 2024

MALNAD TV

HEART OF COFFEE CITY

ಕನ್ನಡದ ಅರ್ಜಿ ಕೊಡಿ.

1 min read

ಈ ಬಾರಿ ಬಂದ ಮಳೆಯಿಂದ ಜಿಲ್ಲೆಯ ಬಹಳಷ್ಟು ಭಾಗಗಳಲ್ಲಿ ಭೂಕುಸಿತ ಹಾಗೂ ರೈತರಿಗೆ ಭಾರಿ ನಷ್ಟ ಸಂಭವಿಸಿದೆ.

ಭಾರಿ ಮಳೆ ಮತ್ತು ಭೂಕುಸಿತದಿಂದ ಆದ ನಷ್ಟದ ಮೌಲ್ಯ ಮಾಪನ ಮತ್ತು ಬೆಳೆ ಪರಿಹಾರ ನೀಡುವು ಬಗ್ಗೆ ಸರ್ಕಾರವು ರೈತರಿಂದ ಅರ್ಜಿಯನ್ನು ಕರೆದಿದ್ದಾರೆ. ಆದರೆ ಸರ್ಕಾರವು ಅರ್ಜಿಯನ್ನು ಆಂಗ್ಲ ಭಾಷೆಯಲ್ಲಿ ನೀಡಿದ್ದು, ಇದು ರೈತರಿಗೆ ಭಾರಿ ಸಮಸ್ಯೆಯನ್ನು ತಂದೊಡ್ಡಿದೆ.

ರೈತರೆಂದರೆ ಉಪೇಕ್ಷೆಯಿಂದ ಕಾಣುವ ಅಧಿಕಾರಿಗಳಿರುವಾಗ ಈ ಆಂಗ್ಲ ಭಾಷೆ ಅರ್ಜಿ ರೈತರನ್ನು ಬೆಳೆ ಪರಿಹಾರ ಪಡೆಯುವಲ್ಲಿ ವಂಚಿತರನ್ನಾಗಿಸುತ್ತಿದೆ. ಈ ಬಗ್ಗೆ ರೈತರೊಬ್ಬರು ಕನ್ನಡದಲ್ಲಿ ಅರ್ಜಿ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕನ್ನಡದ ಅರ್ಜಿ ಕೊಡಿ.

ಸ್ವಾಮಿ ನಮ್ಮ ರೈತರಿಗೆ ಇಂಗ್ಲಿಷ್ ಬರೋಲ್ಲ.

ಕಳೆದ ತಿಂಗಳು ಸುರಿದ ಮಳೆಯಿಂದಾಗಿ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಸರ್ಕಾರ ಬೆಳೆ ಪರಿಹಾರಕ್ಕೆ ಅರ್ಜಿ ಆಹ್ವಾನಿಸಿದ್ದು ಕೃಷಿ‌ ಮತ್ತು ತೋಟಗಾರಿಕಾ ಅಧಿಕಾರಿಗಳು ಆಂಗ್ಲ ಭಾಷೆಯ ಅರ್ಜಿಯನ್ನು ನೀಡಿದ್ದಾರೆ. ಪರಿಹಾರ ಸಿಕ್ಕರೆ ಸಾಕು ಅನ್ನೋ ರೈತರು ಅದೇ ಅರ್ಜಿ ಪಡೆದು ಅರ್ಜಿ ಭರ್ತಿ ಮಾಡಿಸಲು‌ ವಿದ್ಯಾವಂತರ ಮನೆ ಬಾಗಿಲಿಗೆ ಅಲೆದಾಡಿದ್ದಾರೆ. ಕೆಲವರು ಇದರ ಲಾಭ‌‌ ಪಡೆದು ಅರ್ಜಿ ಭರ್ತಿ‌ ಮಾಡಲು 50ರೂಗಳಿಂದ 500ರೂ ವರೆಗೂ ರೈತರಿಂದ ಹಣ ಪಡೆದಿದ್ದಾರೆ.‌ ಅರ್ಜಿ‌ ಸಲ್ಲಿಸಲು ಇಂದೇ ಕೊನೆಯ ದಿನ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಗ್ಲಿಷ್ ಅರ್ಜಿಯಿಂದ ಬೇಸತ್ತ ಕೆಲವು ರೈತರು ಗೊಂದಲದಿಂದಾಗಿ‌ ಇನ್ನೂ ಅರ್ಜಿ ಸಲ್ಲಿಸದೆ ಪರದಾಡುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ‌ ಬೆಳೆ  ಪರಿಹಾರ ‌ಕೇಂದ್ರ ಸರ್ಕಾರದ ಯೋಜನೆ ಅದಕ್ಕಾಗಿ ಇಂಗ್ಲಿಷ್ ಅರ್ಜಿ ಕಳಿಸಿದ್ದಾರೆ ಎಂಬ ಕಾರಣ ಹೇಳಿ‌ ನುಣುಚಿಕೊಂಡಿದ್ದಾರೆ.

ಈ ಸರ್ಕಾರ ಕನ್ನಡ ವಿರೋಧಿ ಸರ್ಕಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆಡಳಿತ ವ್ಯವಹಾರ‌ ಕನ್ನಡ ಭಾಷೆ ಎಂದು ಸರ್ಕಾರದ ಆದೇಶ ಏನಾಯ್ತು.ಇಂಗ್ಲಿಷ್ ಅರ್ಜಿಯಿಂದಾಗಿ ಅನೇಕ ರೈತರು ಅರ್ಜಿ ಸಲ್ಲಿಸಿರುವುದಿಲ್ಲ. ಅರ್ಜಿ ಸಲ್ಲಿಸಲು‌ ಇನ್ನೂ ಒಂದು ವಾರ  ಅವಕಾಶ‌ ನೀಡಬೇಕು.‌ ಇನ್ನು ಮುಂದೆ ಕನ್ನಡದಲ್ಲೇ ಅರ್ಜಿ ನೀಡಬೇಕು.

 

ಶಿವಕುಮಾರ್ ಹೆಚ್.ಎಸ್.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!