ಆರೋಪಿಗಳ ಸ್ಫೋಟಕ ಮಾಹಿತಿಗೆ ಬೆಚ್ಚಿಬಿದ್ದ ಕಾಫಿನಾಡ ಖಾಕಿಗಳು
ಚಿಕ್ಕಮಗಳೂರು : ನಿನ್ನೆ ಕಾಫಿನಾಡಲ್ಲಿ ದರೋಡೆ ಮಾಡಲು ಹೋಗಿ ಸಿಕ್ಕಿಬಿದ್ದ ಆರೋಪಿಗಳ ಕುರಿತಂತೆ ಮತ್ತಷ್ಟು ಸ್ಫೋಟಕ ಮಾಹಿತಿ ಲಭ್ಯವಾಗಿದ್ದು ಕಾಫಿನಾಡ ಖಾಕಿಗಳೇ ಬೆಚ್ಚಿಬಿದ್ದಿದ್ದಾರೆ. ಎಂಟು ದಿನದಿಂದ ದರೋಡೆಗೆ ಪ್ಲ್ಯಾನ್ ಮಾಡಿದ್ದ ಪಡ್ಡೆಹೈಕ್ಳು ದರೋಡೆಗಾಗಿ ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ ಪ್ಲ್ಯಾನ್ ಮಾಡಿದ್ದರು. ಅಗ್ನಿಶಾಮಕ ವಾಹನ ಚಾಲಕ ದೇವೇಂದ್ರಪ್ಪ ದರೋಡೆಕೋರರ ಬೈಕಿಗೆ ಗಾಡಿಯನ್ನ ಅಡ್ಡ ಹಾಕದೆ ಇದ್ದಿದ್ದರೆ ಅವರನ್ನ ಹಿಡಿಯಲು ಆಗುತ್ತಿರಲಿಲ್ಲ ಎಂದು ಸ್ವತಃ ಎಸ್ಪಿಯವರೇ ಸ್ಪಷ್ಟಪಡಿಸಿದ್ದಾರೆ. ಘಟನೆ ಸಂಬAಧ ಇಂದು ಮಾತನಾಡಿದ ಎಸ್ಪಿ ಅಕ್ಷಯ್, ಅವರು ಎಂಟು ದಿನದಿಂದ ಎಲ್ಲಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ದರೋಡೆ ಬಗ್ಗೆ ಆನ್ಲೈನ್ನಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಯೂಟ್ಯೂಬ್ನಲ್ಲಿ ವಿಡಿಯೋ ನೋಡಿ ಅದೇ ರೀತಿ ಪ್ಲ್ಯಾನ್ ಮಾಡಿಕೊಂಡಿದ್ದರು. ಬ್ಲಾಕ್ ಜಾಕೇಟ್, ಶೂ, ಹೆಲ್ಮೇಟ್ ಖರೀದಿಸಿ, ಬೈಕಿನ ನಂಬರ್ ಪ್ಲೇಟ್ ತೆಗೆದು ಮಾಡೆಲ್ ಕೂಡ ತಿಳಿಯದಂತೆ ಬೈಕಿಗೆ ಪ್ಲಾಸ್ಟರ್ ಹಾಕಿ ಯಾವ ಗಾಡಿ ಎಂದೇ ಗೊತ್ತಾಗದಂತೆ ಬದಲಿಸಿದ್ದರು. ಅಗ್ನಿಶಾಮಕ ವಾಹನದ ಡ್ರೈರ್ನಿಂದ ಅಪರಾಧಿಗಳು ಸೆರೆ ಸಿಕ್ಕಿದ್ದಾರೆ. ಒಂದು ವೇಳೆ, ಅಗ್ನಿಶಾಮಕ ಚಾಲಕ ದೇವೇಂದ್ರಪ್ಪ ಗಾಡಿ ಅಡ್ಡ ಹಾಕದೆ ಇದ್ದಿದ್ರೆ ಅವರನ್ನ ಹಿಡಿಯಲು ಆಗುತ್ತಿರಲಿಲ್ಲ. ಅವರು ಇದೇ ಮೊದಲ ಬಾರಿಗೆ ದರೋಡೆಗೆ ಮುಂದಾದ್ರು ಕೂಡ ಪ್ರೊಪೇಷನಲ್ ದರೋಡೆಕೋರರಂತೆ ಎಲ್ಲಾ ರೀತಿ ಸಜ್ಜಾಗಿ ಬಂದಿದ್ದಾರೆ. ಆದರೆ, ದೇವೇಂದ್ರಪ್ಪನವರ ಸಮಯಪ್ರಜ್ಞೆ ಹಾಗೂ ಪೊಲೀಸರ ಸಡನ್ ರೆಸ್ಪಾನ್ಸ್ನಿಂದ ಇಂದು ಕಳ್ಳರು ಅರೆಸ್ಟ್ ಆಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಅಗ್ನಿಶಾಮಕ ಸಿಬ್ಬಂದಿ ದೇವೇಂದ್ರಪ್ಪ ಹಾಗೂ ಪೊಲೀಸರಿಗೆ ನಗದು ಬಹುಮಾನ ನೀಡಿ ಗೌರವಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g