May 18, 2024

MALNAD TV

HEART OF COFFEE CITY

ಕಸಾಯಿಖಾನೆ ಆಯ್ತು, ಅಕ್ರಮ ಮನೆಗಳ ಮೇಲೂ ಜೆಸಿಬಿ ಘರ್ಜನೆ

1 min read

 

ಚಿಕ್ಕಮಗಳೂರು : ಇತ್ತೀಚೆಗೆ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ಮಾಡಿದ್ದ ಚಿಕ್ಕಮಗಳೂರು ನಗರಸಭೆ ಇದೀಗ ಅಕ್ರಮ ಮನೆಗಳ ಮೇಲೂ ಜೆಸಿಬಿ ಘರ್ಜಿಸಿದೆ. ನಗರದ ಇಂದಿರಾಗಾಂಧಿ ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮನೆಗಳ ಮೇಲೆ ಜೆಸಿಬಿ ಘರ್ಜಿಸಿದ್ದು ಹತ್ತಾರು ಮನೆಗಳನ್ನ ನೆಲ ಸಮ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಅಕ್ರಮ ಮನೆಗಳನ್ನೂ ತೆರವು ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವರಿಗೆ ಮನೆ ಕಟ್ಟುವಾಗಲೇ ಅಕ್ರಮ ಮನೆ ಕಟ್ಟಬೇಡಿ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೂ, ಕೆಲವರು ಮನೆ ನಿರ್ಮಿಸಿಕೊಂಡಿದ್ದರು. ಈ ವೇಳೆ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದವರು ತೆರವಿನ ವೇಳೆ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದರು. ನಗರದಲ್ಲಿ ಸುಮಾರು 40ಕ್ಕೂ ಹೆಚ್ಚು ಅಕ್ರಮ ನಿವಾಸಿಗಳು ದಾಖಲೆ ಇಲ್ಲದೆ ವಾಸ ಮಾಡುತ್ತಿರುವುದಾಗಿ ಪಟ್ಟಿ ಮಾಡಿಕೊಂಡಿದ್ದ ನಗರಸಭೆ ಅಕ್ರಮ ಮನೆಗಳ ಮೇಲೆ ದಾಳಿ ಮಾಡಿದೆ. ಈ ವೇಳೆ ಅಕ್ರಮ ನಿವಾಸಿಗಳು ನಗರಸಭೆ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

 

 

4

ನಮ್ಮ ಮೇಲೆಯೇ ಜೆಸಿಬಿ ಹರಿಸಿ, ನಮ್ಮ ಮನೆಗಳ ಬೇಡ ಎಂದು ಜೆಸಿಬಿ ಅಡ್ಡ ನಿಂತಿದ್ದರು. ಪೊಲೀಸರ ಭದ್ರತೆಯಲ್ಲಿ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಹಾಗೂ ಆಯುಕ್ತರು ಬಸವರಾಜ್ ಅನಧೀಕೃತ ಮನೆಗಳ ತೆರವಿಗೆ ಮುಂದಾಗಿದ್ದಾರೆ. ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರು ಸುಮಾರು 10 ವರ್ಷಗಳಿಂದ ವಾಸವಿದ್ದರೂ ದಾಖಲೆ ಮಾಡಿಕೊಳ್ಳದೆ ಇಂದು ತೆರವಿನ ಜಾಗದಲ್ಲಿ ಕಣ್ಣೀರಾಕಿದ್ದಾರೆ. ಕೆಲವರು ಆಶ್ರಯ ಯೋಜನೆ ಬಡಾವಣೆಯಲ್ಲಿ ಮನೆ ಕಟ್ಟಿ ಬೇರೆಯವರಿಗೆ ಬಾಡಿಗೆ ನೀಡಿದ್ದರು. ಮತ್ತಲವರಿಗೆ ಕನ್ನಡವೇ ಬರಲ್ಲ. ಹಿಂದಿ ಮಾತ್ರ ಮಾತನಾಡುತ್ತಾರೆ. ಅವರು ಯಾರು, ಎಲ್ಲಿಯವರು, ಹೇಗೆ ಬಂದರೂ ಎಂಬ ಮಾಹಿತಿಯೂ ಇಲ್ಲ. ಆದರೆ, ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಅಂತವರ ಅಕ್ರಮ ಮನೆಯನ್ನೂ ತೆರವು ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!