ಜಿಲ್ಲೆಯಲ್ಲಿ ಅ. 20 ಮಹಿಷ ದಸರಾ ಆಚರಣೆ
1 min readಚಿಕ್ಕಮಗಳೂರು: ದಸರಾ ಆಚರಣ ಸಮಿತಿ ಮತ್ತು ಪ್ರಗತಿಪರ ಒಕ್ಕೂಟಗಳ ಸಹಯೋಗದಲ್ಲಿ ಅ. 20 ರಂದು ಮಹಿಷ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದಸರಾ ಆಚರಣ ಸಮಿತಿಯ ಮುಖಂಡ ದಂಡರ ಮಕ್ಕಿ ಶ್ರೀನಿವಾಸ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ ವೃತ್ತದವರೆಗೆ ಮಹಿಷ ದಸರಾ ಮೆರವಣಿಗೆ ನಡೆಯಲಿದೆ. ಮೂಲ ನಿವಾಸಿಗಳ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿಗಳ ಬಗ್ಗೆ ರ್ಸಾಜನಿಕರಿಗೆ ಅರಿವು ಮೂಡಿಸುವ ಸಲುವಾಗಿ, ಪ್ರಗತಿಪರ ಚಿಂತಕರು ಮತ್ತು ನಿ. ಪ್ರಧ್ಯಾಪಕರಾದ ಪ್ರೊ. ಕೆ.ಎಸ್. ಭಗವಾನ್ ಮತ್ತು ನಿವೃತ್ತ ಪ್ರೋ. ಮಹೇಶ್ಚಂದ್ರ ಗುರುಗಳು ಈ ರ್ಕಾಯಕ್ರಮಕ್ಕೆ ಆಗಮಿಸಿ ಉಪನ್ಯಾಸ ನೀಡಲಿದ್ದಾರೆ.
ಆದರೆ ಈ ರ್ಕಾಯಕ್ರಮವನ್ನು ತಡೆಯಲು ಕೆಲವು ಕೋಮುವಾದಿ ಸಂಘಟನೆಗಳು ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಅಥಿತಿಗಳಿಗೆ ತೊಂದರೆ ನೀಡುವುದಾಗಿ ಸಾರ್ವಜನಿಕವಾಗಿ ಬೇದರಿಕೆ ಹಾಕುತ್ತಿರುವುದು ಬೇಸರದ ಸಂಗತಿ. ಈ ಮಹಿಷರಾಜನ ಕುರಿತು ಪ್ರಸ್ತುತ ಯುವ ಜನತೆಗೆ ತಿಳಿಸುವ ಮತ್ತು ಮೂಲ ನಿವಾಸಿಗಳ ಇತಿಹಾಸ ಅರಿತು ಪ್ರಸ್ತುತ ಮೂಲ ನಿವಾಸಿಗಳ ಸ್ಥಿತಿಗಳ ಕುರಿತಾಗಿರುದೇ ವಿನಃ ಯಾರನ್ನು ಅವಹೇಳನ ಮಾಡವ ಉದ್ದೇಶವನ್ನು ಹೊಂದಿಲ್ಲ. ಆದ್ದರಿಂದ ಈ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಸಂಚು ಮಾಡಿಸಿರುವ ಸಂಘಟನೆಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿ, ಕಾರ್ಯಕ್ರಮಕ್ಕೆ ಸೂಕ್ತ ರೀತಿಯ ರಕ್ಷಣೆ ನೀಡುವುದರೊಂದಿಗೆ ಶಾಂತ ರೀತಿಯಲ್ಲಿ ಕಾರ್ಯಕ್ರಮ ನಡೆಸಲು ಸಹಕರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿಮಾಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g