ಮುಳ್ಳೋಡಿ ಕೆಸರು ಗದ್ದೆ ಓಟ ಸ್ಪರ್ಧೆಗೆ ಹುಸೇನ್ ಬೋಲ್ಟ್ ಗೆ ಸ್ವಾಗತ
1 min readಚಿಕ್ಕಗಳೂರು..: ಹದಗೆಟ್ಟ ರಸ್ತೆ ದುರಸ್ತಿ ಮಾಡಿ ಕೊಡದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ವ್ಯಂಗ್ಯ ವಾಡಿ ಒಲಂಪಿಕ್ಸ್ ನ 100 ಮೀಟರ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿರೋ ಜಮೈಕಾ ದೇಶದ ಓಟಗಾರ ಹುಸೇನ್ ಬೋಲ್ಡ್ ಅವರನ್ನ ಕೆಸರು ಗದ್ದೆ ಸ್ಪರ್ಧೆಗೆ ಸ್ವಾಗತಿಸಿ ಜನಪ್ರತಿನಿಧಿ ಅಧಿಕಾರಿಗಳ ವಿರುದ್ದ ಮುಳ್ಳೋಡಿ ಗ್ರಾಮದ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಸಂಸೆಯಿಂದ ಮುಳ್ಳೋಡಿ ಗ್ರಾಮದ ರಸ್ತೆ ಸಂಪೂರ್ಣ ಹದಗೆಟ್ಟು ಕೆಸರು ಗದ್ದೆ ಓಟ ಸ್ಪರ್ಧೆಯ ಮೈಧಾನದಂತೆಯಾಗಿದೆ. ಈ ಹಿನ್ನೆಲೆ ಗ್ರಾಮಸ್ಥರು ಕೆಸರುಗದ್ದೆ ಓಟ್ ಸ್ಪರ್ಧೆಗೆ ಒಲಂಪಿಕ್ಸ್ ನಲ್ಲಿ 100 ಮೀಟರ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿರೋ ಜಮೈಕಾ ದೇಶದ ಓಟಗಾರ ಹುಸೇನ್ ಬೋಲ್ಟ್ ಅವರನ್ನ ಸ್ಪರ್ಧೆಗೆ ಸ್ವಾಗತ ಕೋರಿದ್ದಾರೆ. ಹದಗೆಟ್ಟ ರಸ್ತೆ ಮಧ್ಯೆ ಹುಸೇನ್ ಬೋಲ್ಟ್ ನಿಲ್ಲಿಸಿ ವ್ಯಂಗ್ಯವಾಡಿ ಸ್ಪರ್ಧೆಗೆ ಶಾಸಕ, ಸಂಸದ, ಜಿಪಂ-ತಾಪಂ-ಗ್ರಾಪಂ ಅಧಿಕಾರಿಗಳ ಬರಬೇಕಿದೆ
ಕ್ರೀಡಾಂಗಣ ನಿರ್ಮಿಸಿಕೊಟ್ಟ ಅಧಿಕಾರಿ, ಜನಪ್ರತಿನಿಧಿಗಳಿಗೆ ಹಳ್ಳಿಗರ ಋಣಿ ಎಂದು ಸುಮಾರು 40 ವರ್ಷದಿಂದ 8 ಕಿ.ಮೀ. ರಸ್ತೆ ನಿರ್ಮಿಸಿ ಕೊಡದ ಸರ್ಕಾರ ವಿರುದ್ದ ವ್ಯಂಗವಾಡಿ ಹಳ್ಳಿಗರ ವಿಭಿನ್ನ ವ್ಯಂಗ್ಯ ವಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g