April 29, 2024

MALNAD TV

HEART OF COFFEE CITY

ಹರಾಜು ಕೂಗಿದವರಿಗೆ ಮಳಿಗೆ ನೀಡಲು ಒತ್ತಾಯ

1 min read

ಚಿಕ್ಕಮಗಳೂರು : ಮಳಿಗೆಗಳ ಬಹಿರಂಗ ಹರಾಜಿನ ನಿಯಮ ನಿಬಂಧನೆಗಳ ಅನ್ವಯ ಮಳಿಗೆ ಹರಾಜಿನಲ್ಲಿ ಭಾಗವಹಿಸಿ ಹರಾಜು ಕೂಗಿದ್ದರು, ಹರಾಜು ಕೂಗಿದವರಿಗೆ ಮಳಿಗೆಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀಡದೆ ಹಳೆಯ ಬಾಡಿಗೆದಾರರಿಗೆ ಆದ್ಯತೆ ನೀಡುತ್ತಿರುವುದನ್ನು ನಿಲ್ಲಿಸಬೇಕೆಂದು ಇಂದಿರಾ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಜ್ಜಂಪುರ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜನ್ನು ಸಾರ್ವಜನಿಕವಾಗಿ ಕರಪತ್ರ ಹಂಚಿದ್ದು, ಇದರಲ್ಲಿ ತಿಳಿಸಿದಂತೆ 36 ಷರತ್‍ಗಳಿಗೆ ಒಳಪಟ್ಟು ಹೊಸದಾಗಿ ಕರೆದ ಹರಾಜಿನಲ್ಲಿ ಮುಂಗಡ 50.000 ರೂಪಾಯಿಗಳನ್ನು ಕಟ್ಟಿ ಹರಾಜು ಕೂಗಿದ್ದೆವು. ಆದರೆ ಈಗ ಅಜ್ಜಂಪುರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಳೆಯ ಬಾಡಿಗೆದಾರರಿಗೆ ಶೇಕಡಾ 5 ರಷ್ಟು ಬಾಡಿಗೆ ಹೆಚ್ಚಿಸಿ ಹಳೆಯ ಬಾಡಿಗೆದಾರರಿಗೆ ಮಳಿಗೆಗಳನ್ನು ನಿಡುವುದಾಗಿ ಹೇಳಿದ್ದಾರೆ. ಆಗಸ್ಟ್ 22 ರಂದು ನಡೆದ ಬಹಿರಂಗ ಹರಾಜಿನ ಬಿಡ್ಡುದಾರರಿಗೆ ಮೊದಲ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!