April 29, 2024

MALNAD TV

HEART OF COFFEE CITY

ಆಟೋ ನಿಲ್ದಾಣಕ್ಕೆ ಚಾಲಕರ ಪಟ್ಟು, ಸಿಪಿಐ ವಿರುದ್ಧ ಗರಂ

1 min read

 

ಕಳಸ: ತಾಲೂಕಿನ ಕುದುರೆಮುಖ ವೃತ್ತ ನಿರೀಕ್ಷಕ ರಮೇಶ್ ವಿರುದ್ಧ ಹಿರೇಬೈಲು ಆಟೋ ಚಾಲಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಆಟೋ ನಿಲುಗಡೆಗೆ ಸಂಬoಧಪಟ್ಟoತೆ ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆಟೋಚಾಲಕರು ಕಳಸ ತಾಲೂಕಿನ ಹಿರೇಬೈಲು ಇಡಕಿಣಿ ಗ್ರಾಮ ಪಂಚಾಯಿತಿ ಎದುರು ಆಟೋಗಳನ್ನು ತೆಗೆದುಕೊಂಡು ಬಂದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮೀಣ ರಸ್ತೆಯಲ್ಲಿ ಆಟೋ ನಿಲ್ಲಿಸುವುದನ್ನು ಬದಲಾಯಿಸಿ ಮುಖ್ಯ ರಸ್ತೆಯಲ್ಲಿ ನಿಲ್ಲಿಸುವಂತೆ ಪೊಲೀಸ್ ಠಾಣೆಯಿಂದ ಸೂಚನೆ ನೀಡಲಾಗಿದ್ದು ಇದಕ್ಕೆ ಆಟೋ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮುಖ್ಯರಸ್ತೆಯಲ್ಲಿ ಹಲವಾರು ಬಾರಿ ಅಪಘಾತ ಸಂಭವಿಸಿರುವ ಕಾರಣ ಗ್ರಾಮೀಣ ರಸ್ತೆಯಲ್ಲಿ ಆಟೋವನ್ನು ನಿಲ್ಲಿಸಿಕೊಳ್ಳುತ್ತಿದ್ದರು ಈಗ ಅಲ್ಲಿ ನಿಲ್ಲಿಸಲು ಅವಕಾಶ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು ಅವಕಾಶ ನೀಡುವವರೆಗೂ ಪ್ರತಿಭಟನೆ ನಡೆಸುವುದಾಗಿ ಆಟೋ ಚಾಲಕರು ತೀರ್ಮಾನಿಸಿದ್ದಾರೆ.

 

ಹಲವು ವರ್ಷಗಳಿಂದ ಇಲ್ಲ ಆಟೋಗಳನ್ನು ನಿಲ್ಲಿಸಿಕೊಂಡಿ ಬಂದಿದ್ದೇವೆ. ಆಟೋ ನಿಲ್ಲಿಸುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಸಾರ್ವಜನಿಕರು ಸಹ ವಿರೋಧ ವ್ಯಕ್ತಪಡಿಸಿಲ್ಲ. ಈಗ ಹುಡುಗಿಯರಿಗೆ ಚುಡಾಯಿಸುತ್ತಿದ್ದಾರೆ ಎಂಬ ದೂರು ಬಂದಿದೆ ಎಂದು ಹೇಳುತ್ತಿದ್ದಾರೆ. ಯಾರಾದ್ರು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಆದರೆ ಸುಖಾಸುಮ್ಮನೆ ಈ ತೀರ್ಮಾನ ತಗೆದುಕೊಂಡರೆ ೪೦ ಜನರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ ಈ ಬಗ್ಗೆ ಉನ್ನತ ಅಧಿಕಾರಿಗಳು ಸೂಕ್ತ ಗಮನ ಹರಿಸಿ ನ,ಗೆ ಶಾಶ್ವತ ಪರಿಹಾರ ನೀಡಬೇಕು. ನಾಳೆಯಿಂದ ಯಾವುದೇ ಶಾಲೆ ಮಕ್ಕಳು ಸೇರಿದಂತೆ ಸಂಪೂರ್ಣವಾಗಿ ಆಟೋ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುತ್ತದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!