ಸಾಮೂಹಿಕ ಎಪ್ಸಿ, ಇನ್ಸೂರೆನ್ಸ್ ಮಾಡಿಸಿ – ದಲ್ಲಾಳಿಗಳಿಂದ ರಕ್ಷಿಸಿ
1 min readಚಿಕ್ಕಮಗಳೂರು : ನಗರದಲ್ಲಿರುವ ಆಟೋಗಳ ಎಪ್ಸಿ ಮತ್ತು ಇನ್ಸುರೆನ್ಸ್ ಗಳನ್ನು ಮಾಡಿಕೊಳ್ಳಲು ಕಾಲಾವಕಾಶ ನೀಡುವಂತೆ ಸೇರಿದಂತೆ ಆಟೋ ಚಾಲಕರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳಿಗೆ ಚಿಕ್ಕಮಗಳೂರು ನಗರ ಆಟೋ ಸಂಘದ ವತಿಯಿಂದ ಮನವಿ ಪತ್ರ ನೀಡಲಾಯಿತು.
ಕೋರೋನ ಮಹಾಮಾರಿಯಿಂದ ಬಡ ಆಟೋ ಚಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚ, ಕುಟುಂಬ ನಿರ್ವಹಣೆ ಸೇರಿದಂತೆ ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿದ್ದೇವೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಎಪ್ಸಿ ಮತ್ತು ಇನ್ಸೂರೆನ್ಸ್ ಮಾಡಿಲ್ಲವೆಂದು ಆಟೋಗಳನ್ನು ಸೀಜ್ ಮಾಡುತ್ತಿದ್ದು, ಆಟೋಗಳನ್ನೇ ನಂಬಿದ ಚಾಲಕನ ಕುಟುಂಬ ಬೀದಿಗೆ ಬೀಳುವಂತಾಗಿದೆ. ಮಾನವೀಯತೆ ದೃಷ್ಠಿಯಿಂದ ಎಪ್ಸಿ ಮತ್ತು ಇನ್ಸುರೆನ್ಸ್ಗಳನ್ನು ಮಾಡಿಕೊಳ್ಳಲು ಮೂರು ತಿಂಗಳ ಕಾಲಾವಕಾಶ ನೀಡಬೇಕು. ಅಲ್ಲದೆ ಸಾರಿಗೆ ಪ್ರಾಧಿಕಾರ ಇಲಾಖೆಯೊಂದಿಗೆ ಚರ್ಚಿಸಿ ತಮ್ಮ ಇಲಾಖೆಯ ಸಹಯೋಗದಲ್ಲಿ ಸಾಮೂಹಿಕ ಆಟೋಗಳ ಎಪ್ಸಿ ಮತ್ತು ಇನ್ಸುರೆನ್ಸ್ ಗಳನ್ನು ಮಾಡಿ ದಲ್ಲಾಳಿಗಳಿಗೆ ನೀಡುವ ದುಬಾರಿ ಶುಲ್ಕವನ್ನು ತಪ್ಪಿಸಬೇಕೆಂದರಲ್ಲದೆ, ಕೆಲವು ಗ್ಯಾಸ್ ಬಂಕ್ಗಳಲ್ಲಿ ಗ್ಯಾಸ್ ಸಿಗದೆ ಪರಿತಪಿಸುತ್ತಿದ್ದು, ಆಟೋ ಚಾಲಕರ ಸಮಸ್ಯೆಗಳಿಗೆ ಸ್ಪಂಧಿಸಬೇಕೆoದು ಒತ್ತಾಯಿಸಿದ್ರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g