May 7, 2024

MALNAD TV

HEART OF COFFEE CITY

ಮೂಲಭೂತ ಸೌಲಭ್ಯದಿಂದ ವಂಚಿತ, ನಿತ್ಯ 13 ಕಿ.ಮೀ. ನಡೆದೆ ಜೀವನ ನಡೆಸೋ ಕುಗ್ರಾಮ

1 min read

ಸ್ವಾಂತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಕುಡಿಯೋಕೆ ಶುದ್ಧ ನೀರು, ವಿದ್ಯುತ್, ರಸ್ತೆ ಇಲ್ಲದೆ ಹಳ್ಳಿಗರು ಪರದಾಡುವ ಸ್ಥಿತಿ ಇಂದಿಗೂ ಜೀವಂತವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಾಡಿನ ತಾಲೂಕು ಕಳಸ ತಾಲೂಕಿನ ಇಂದಿಗೂ ಮೂಲಭೂತ ಸೌಲಭ್ಯಗಳಿಲ್ಲದ ಗ್ರಾಮ ಹತ್ತಾರಿವೆ. ಅವುಗಳಲ್ಲಿ Pಮಾವಿನಕೆರೆ-ಮುಜೇಖಾನ್ ಗ್ರಾಮ ಕೂಡ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಸ್ವಾತಂತ್ರ ಬಂದು ಏಳು ದಶಕಗಳೇ ಕಳೆದರೂ ಕುಡಿಯಲು ಶುದ್ಧ ನೀರಿಲ್ಲ. ರಸ್ತೆ-ಚರಂಡಿ-ಕರೆಂಟ್ ಯಾವುದೂ ಇಲ್ಲ. ಮೂಲಭೂತ ಸೌಕರ್ಯಕ್ಕಾಗಿ ಇಂದಿಗೂ ಜನಸಾಮಾನ್ಯರು ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮುಜೆಖಾನ್ ಗ್ರಾಮದಲ್ಲಿ 50 ರಿಂದ 70 ಮನೆಗಳಿದ್ದು ನಿತ್ಯವೂ 13 ಕಿಲೋ ಮೀಟರ್ ನಡೆದು ಕಳಸ ಪಟ್ಟಣ ತಲುಪುವ ಅನಿವಾರ್ಯತೆ ಎದುರಾಗಿದೆ. ಸರ್ಕಾರಿ ಬಸ್ ಅಥವಾ ಖಾಸಗಿ ಬಸ್ ಸೇವೆಯೂ ಇಲ್ಲ. ತುರ್ತಾಗಿ ಆಸ್ಪತ್ರೆಗೆ ಹೋಗಬೇಕೆಂದರೆ 600 ರಿಂದ 1000 ಹಣ ಕೊಟ್ಟು ಆಟೋದಲ್ಲಿ ಹೋಗಬೇಕು. ರಸ್ತೆಯ ದುಸ್ಥಿತಿ ನೋಡಿ ಯಾವುದೇ ಖಾಸಗಿ ವಾಹನಗಳು ಗ್ರಾಮಕ್ಕೆ ಬರುತ್ತಿಲ್ಲ ಅಂತಿದ್ದಾರೆ. ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ. ತುರ್ತಾಗಿ ನಮ್ಮೂರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಿ ಎಂದು ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇರೋ ರಸ್ತೆಯನ್ನ ತಕ್ಕಮಟ್ಟಿಗೆ ದುರಸ್ಥಿ ಮಾಡಿಕೊಳ್ಳು ಅರಣ್ಯ ಅಧಿಕಾರಿಗಳು ಬೀಡೋದಿಲ್ಲ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

 

 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!