April 29, 2024

MALNAD TV

HEART OF COFFEE CITY

ವಿಶ್ವ ದರ್ಶನದ ದ್ವಿತೀಯ ಸಮ್ಮೇಳನದಲ್ಲಿ ಸರ್ವ ಕಲೆಗಳ ದರ್ಶನ

1 min read

 

ಬೆಂಗಳೂರು ವಿಶ್ವ ದರ್ಶನ ದಿನಪತ್ರಿಕೆಯ 2ನೇ ಮಹಾಸಮ್ಮೇಳನಕ್ಕೆ ಬೆಂಗಳೂರಿನ ಕೆಂಗೇರಿಯ ಪ ಪೂಜ್ಯ ಶ್ರೀ ಆರೂಢ ಭಾರತಿ ಸ್ವಾಮೀಜಿ ಅಧ್ಯಕ್ಷರು ಶ್ರೀ ಸಿದ್ಧಾರೂಢರ ಮಿಷನ್ ಆಶ್ರಮ ಸಾಕ್ಷಿಯಾಯಿತು.ಡಾಕ್ಟರೇಟ್ ಎಸ್ ಎಸ್ ಪಾಟೀಲರ ಸಾರತ್ಯದಲ್ಲಿ ಈ ಬೃಹತ್ ಕಾರ್ಯಕ್ರಮಕ್ಕೆ ವಿವಿಧ ಗಣ್ಯ ಸ್ವಾಮೀಜಿಗಳಿಂದ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲಿ ಇರುವಂತಹ ವಿವಿಧ ವಿಭಿನ್ನ ಸಾಂಸ್ಕೃತಿಕ ಕಲೆ, ಸಂಗೀತ, ಇನ್ನೂ ಅನೇಕ ಕಲೆಗಳನ್ನು ಒಂದೇ ವೇದಿಕೆಯಲ್ಲಿ ತಂದು ಅದು ನಮ್ಮಲ್ಲಿ ಇನ್ನೂ ಜೀವಂತವಾಗಿದೆ ಎಂಬುವುದಕ್ಕೆ ಸಮ್ಮೇಳನದ ಮೊದಲ ದಿನ ಜೀವಂತ ಸಾಕ್ಷಿಯಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ.ಪೂ.ಶ್ರೀ ಶಿವಾನುಭವ ತ್ರಿಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಬೇಲಿಮಠ ಬೆಂಗಳೂರು ರವರು ನಾವು ಇಲ್ಲಿ ಅನೇಕ ಸಾಧಕರನ್ನು ಒಂದೇ ವೇದಿಕೆಯಲ್ಲಿ ನೋಡುವ ಭಾಗ್ಯ ನಮಗೆ ಆ ದೇವರು ಒದಗಿಸಿಕೊಟ್ಟಿದ್ದಾನೆ ಇಂತಹ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಶ್ವದರ್ಶನ ಪತ್ರಿಕೆಯ ಸಂಪಾದಕರು ಡಾ.ಎಸ್.ಎಸ್ ಪಾಟೀಲರ ಇಂತಹ ಯೋಜನೆಗಳನ್ನು ನಾವು ಶ್ಲಾಘಿಸಬೇಕು ಇವರ ಇಂತಹ ಯೋಚನೆಗಳು ಸಮಾಜಕ್ಕೆ ಇಂದು ಬೇಕಾಗಿದೆ.ನಮ್ಮ ಸುತ್ತಲೂ ನಮಗೆ ಸಾಕಾಷ್ಟು ವಿಚಾರಗಳ ದರ್ಶನವಾಗುತ್ತದೆ ಆದರೇ ಅಂತಹ‌ ವಿಚಾರಗಳನ್ನು ನಾವು ಬೇಗ ಮರೆತು ಬಿಡುತ್ತೇವೆ ಆದರೆ ಇಲ್ಲಿ ನಿಮಗೆ ದರ್ಶನ ವಾಗಿದ್ದು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂಬುದು ಇಲ್ಲಿ ಪಟೇಲರು ನಮಗೆ ತೋರಿಸಿ ಕೊಟ್ಟಿದ್ದಾರೆ ಅದಕ್ಕೆ ನಾನು ಏನ್ರೀ ಪಾಟೀಲರೇ ಅದು ನಿಮ್ಮಿಂದ ಇಂತಹ ವಿಭಿನ್ನವಾದ ಸರ್ವರನ್ನೂ ಕೂರಿಸಿ ಇಲ್ಲಿ ಎಲೆಮರೆ ಕಾಯಿಯಂತೆ ಸಮಾಜದಲ್ಲಿ ಸಾಧಕರನ್ನು ಗುರುತಿಸಲು ಸಾಧ್ಯವೇ ಎಂದಾಗ ಅವರು ಅದಕ್ಕೆ ‘ಎಸ್, ಅಂದಿದ್ದರು ಅದರಂತೆ ಯಾರಿಂದ ಅಸಾಧ್ಯವಾಗಿತ್ತು ಅದನ್ನು ಸಾದ್ಯವಾಗಿಸಿವ ಕೆಲಸ ಮಾಡಿದ್ದಾರೆ ಅದಕ್ಕೆ ಅವರನ್ನು ಎಸ್.ಎಸ್.ಪಾಟೆಲರು ಎಂದು ಹೆಸರು ಬಂದಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!