ಸಿ.ಟಿ.ರವಿ ಈ ಬಾರಿಯೂ ಗೆಲ್ತಾರೆ, ಅಭಿಮಾನಿಯ ಪ್ರಶ್ನೆಗೆ ಉತ್ತರ ನೀಡಿದ ಚೌಡೇಶ್ವರಿ ದೇವಿ…!
1 min read
ಚಿಕ್ಕಮಗಳೂರು.: ಸಿ.ಟಿ.ರವಿ ಈ ಬಾರಿ ಗೆಲ್ಲುತ್ತಾರೋ…. ಸೋಲುತ್ತಾರೋ….. ಅಪ್ಪಣೆ ಕೊಡು ತಾಯೇ ಎಂದು ಪ್ರಶ್ನೆ ಕೇಳಿದ ಅಭಿಮಾನಿಗೆ ಚೌಡೇಶ್ವರಿ ದೇವಿ ಬಲಭಾಗದಲ್ಲಿ ಅಪ್ಪಣೆ ನೀಡಿದ್ದು ಸಿ.ಟಿ.ರವಿ ಅಭಿಮಾನಿಗಳು ಸಿ.ಟಿ.ರವಿ ಈ ಬಾರಿಯೂ ಗೆಲ್ಲುತ್ತಾರೆ ಎಂದು ಸಂತಸಪಟ್ಟಿದ್ದಾರೆ. ನಗರದ ಶಂಕರಪುರ ಸಮೀಪದ ಶಾಂತಿನಗರದ ಇತಿಹಾಸ ಪ್ರಸಿದ್ಧ ಚೌಡೇಶ್ವರಿ ದೇವಿಗೆ ಹರಕೆ ಸಿ.ಟಿ.ರವಿ ಅಭಿಮಾನಿ ರವಿ ಎಂಬ ಬಿಜೆಪಿ ಕಾರ್ಯಕರ್ತ ದೇವರಿಗೆ ಪ್ರಶ್ನೆ ಹಾಕಿ ದೇವರ ಮುಂದಿನ ಹಗ್ಗ ಹಿಡಿದು ನಿಂತಿದ್ದ. ಹಗ್ಗ ಬಲಭಾಗಕ್ಕೆ ತಿರುಗಿದರೆ ಸಿ.ಟಿ.ರವಿ ಗೆಲ್ಲುತ್ತಾರೆ. ಎಡಭಾಗಕ್ಕೆ ತಿರುಗಿದರೆ ಸೋಲುತ್ತಾರೆ ಎಂದು ಪೂಜೆ ಮಾಡಿ ಪ್ರಶ್ನೆ ಕೇಳಿ ಹಗ್ಗ ಹಿಡಿದು ನಿಂತಿದ್ದ. ಚೌಡೇಶ್ವರಿ ಭಕ್ತ ಹಾಗೂ ಸಿ.ಟಿ.ರವಿ ಅಭಿಮಾನಿ ರವಿ ಹಗ್ಗ ಹಿಡಿದು ನಿಲ್ಲುತ್ತಿದ್ದಂತೆ ಬಲಭಾಗಕ್ಕೆ ಒಂದೇ ಸಮನೆ ತಿರುಗಿದ್ದಾರೆ. ಇದನ್ನ ಕಣ್ಣಾರೆ ಕಂಡ ಭಕ್ತರು ಸಿ.ಟಿ.ರವಿ ಗೆಲ್ಲುತ್ತಾರೆ ಎಂದು ಸಂತಸಗೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಶಾಸಕರಾಗಿರೋ ಸಿ.ಟಿ.ರವಿ ಮಂತ್ರಿಯಾಗಿ ಇದೀಗ ರಾಷ್ಟ್ರ ರಾಜಕಾರಣದತ್ತವೂ ದಾಪುಗಾಲಿಟ್ಟಿದ್ದಾರೆ.
ಆದರೆ, ಕ್ಷೇತ್ರದಲ್ಲಿ ಸಿ.ಟಿ.ರವಿಯನ್ನ ಮಣಿಸಲೇಬೇಕೆಂದು ಕಾಂಗ್ರೆಸ್-ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳು ಹಠಕ್ಕೆ ಬಿದ್ದಿವೆ. ಸಿ.ಟಿ.ರವಿ ಸೋಲಲು ಯಾವ ಅಭ್ಯರ್ಥಿ ಸೂಕ್ತ ಎಂದು ಕಾಂಗ್ರೆಸ್ ಕೂಡ ಬಲಿಷ್ಠ ಅಭ್ಯರ್ಥಿ ಕಣಕ್ಕಿಳಿಸಲು ಪಣತೊಟ್ಟಿದೆ. ಆದರೆ, ಸಿ.ಟಿ.ರವಿ ಈ ಬಾರಿಯೂ ವಿರೋಧ ಪಕ್ಷಗಳ ಅಭ್ಯರ್ಥಿ ಹುಟುಕಾಟ ಹಾಗೂ ತನ್ನ ಅಭಿವೃದ್ಧಿ ಕಾರ್ಯದಿಂದ ಗೆಲ್ಲುವ ಭರವಸೆ ಹೊಂದಿದ್ದಾರೆ. ಆದರೆ, ಈ ಮಧ್ಯೆ ಸಿ.ಟಿ.ರವಿ ಅಭಿಮಾನಿಗೆ ಚೌಡೇಶ್ವರಿ ದೇವಿ ಸಿ.ಟಿ.ರವಿ ಗೆಲ್ಲುತ್ತಾರೆಂಬ ಹಸಿರು ನಿಶಾನೆ ತೋರಿರುವುದು ಬಿಜೆಪಿ ವಲಯದಲ್ಲಿ ಸಂತಸ ತಂದಿದೆ. ಆದರೆ, ಮತದಾರರ ಅಂತರಾಳ ಏನಿದೆ ಅನ್ನೋದಕ್ಕೆ ಇನ್ನೂ ನಾಲ್ಕೈದು ತಿಂಗಳು ಕಾಯಲೇಬೇಕು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g