ಮುಂದುವರೆದ ಮಳೆ ಅವಾಂತರ : ಹಿರೇಬೈಲ್ ಬಳಿ ಧರೆ ಕುಸಿತ ಸಂಚಾರ ಬಂದ್
1 min readಮಲೆನಾಡಲ್ಲಿ ಮಳೆ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ ಇದರೊಂದಿಗೆ ಮಳೆಯ ಅವಾಂತರಗಳೂ ಕೂಡಾ ದುಪ್ಪಟ್ಟುಗೊಳ್ಳುತ್ತಿವೆ. ಕಳಸ ತಾಲೂಕಿನ ಹಿರೇಬೈಲ್-ಕೊಟ್ಟಿಗೆಹಾರ ರಸ್ತೆಯಲ್ಲಿ ಧರೆ ಕುಸಿತವಾಗಿದ್ದು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ,
ಕಳಸ ತಾಲೂಕಿನ ಹಿರೇಬೈಲ್ ಗ್ರಾಮದ ಸುತ್ತಮುತ್ತಲು ನಿರಂತರ ಮಳೆಯಾಗುತ್ತಿದ್ದು ಅಲ್ಲಲ್ಲಿ ಮಣ್ಣು ಜರಿಯುತ್ತಿದೆ, ಪರಿಣಾಮ ರಸ್ತೆಗೆ ಬಂದು ಮಣ್ಣು ಬೀಳುತ್ತಿದ್ದು ವಾಹನ ಸಂಚಾರ ವ್ಯತ್ಯಯವಾಗಿದೆ, ಕಳಸದ ಹಿರೇಬೈಲ್ ಸಮೀಪ ರಾಜ್ಯ ಹೆದ್ದಾರಿಯಲ್ಲಿಯೇ ಧರೆ ಕುಸಿತಗೊಂಡಿದ್ದು ರಸ್ತೆಯಲ್ಲಿ ಬಿದ್ದಿದ್ದ ಮಣ್ಣನ್ನು ಸ್ಥಳೀಯರೇ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ, ಧರೆ ಕುಸಿತದಿಂದ ಕೆಲ ಗಂಟೆಗಳ ಈ ಮಾರ್ಗದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು, ಮೂರು ವರ್ಷದ ಹಿಂದೆಯೂ ಈ ಸ್ಥಳದ ಪಕ್ಕದಲ್ಲಿಯೇ ಧರೆ ಕುಸಿತವಾಗಿತ್ತು ಇದರಿಂದಾಗಿ ಪದೇ ಪದೇ ಈ ಸಮಸ್ಯೆ ಮರುಕಳಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದು ಲೋಕೋಪಯೋಗಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g