ದನಗಳ ಅಬ್ಬರ ಕಂಡು ಬಿಟ್ಟು ಓಡಿದ ದನಗಳ್ಳರು, ಸಿಸಿಟಿವಿಯಲ್ಲಿ ಸೆರೆ
1 min readರಸ್ತೆ ಬದಿ ಮಲಗಿದ್ದ ರಾಸುಗಳನ್ನ ಕದಿಯಲೆಂದು ಎರಡು ಸಲ ಬಂದರೂ ರಾಸುಗಳು ದನಗಳ್ಳರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ನಗರದ ಗೌರಿಕಾಲುವೆಯಲ್ಲಿ ಭಾನುವಾರ ರಾತ್ರಿ-ಸೋಮವಾರ ಬೆಳಗ್ಗಿನ ಜಾವ ದನಗಳನ್ನ ಕದಿಯಲೆಂದು ಮಹೇಂದ್ರಾ ಮ್ಯಾಕ್ಸಿಮ ಕಾರಲ್ಲಿ ಮೂರ್ನಾಲ್ಕು ಜನ ದನಗಳ್ಳರು ಬಂದಿದ್ದರು. ಬೀದಿ ಬದಿ ಮಲಗಿದ್ದ ರಾಸುಗಳನ್ನ ಗಾಡಿಗೆ ತುಂಬುವಷ್ಟರಲ್ಲಿ ರಾಸುಗಳ ಅಬ್ಬರ ಕಂಡು ಆಗೋದಿಲ್ಲ ಎಂದು ಬಿಟ್ಟು ಹೋಗಿದ್ದಾರೆ. ನಗರದ ಗೌರಿ ಕಾಲುವೆಯಲ್ಲಿ ತಿಂಗಳಿಗೆ ಎರಡ್ಮೂರು ದಿನ ದನಗಳ್ಳತನ ಮಾಮೂಲಿಯಾಗಿದೆ. ಹಸುಗಳನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ವೃದ್ಧೆಯೇ ನಾಲ್ಕು ಹಸುಗಳನ್ನೂ ದನಗಳ್ಳರು ಕದ್ದಿದ್ದಾರೆ. ಗೌರಿಕಾಲುವೆಗೆ ದನಗಳ್ಳರು ಬರುವುದೇ ಮಧ್ಯರಾತ್ರಿ ಅಥವ ಬೆಳಗ್ಗಿನ ಜಾವ. ಈಗಾಗಲೇ ಕಳೆದೊಂದು ತಿಂಗಳಲ್ಲಿ ಮೂರು ರಾಸುಗಳನ್ನ ಕದ್ದಿದ್ದಾರೆ. ಗೌರಿಕಾಲುವೆಯಲ್ಲಿ ಎರಡು ರಾಸುಗಳು, ಗಣಪತಿ ದೇವಸ್ಥಾನದ ಬಳಿ ಒಂದು ರಾಸುಗಳನ್ನ ಕದ್ದಿದ್ದಾರೆ. ದನಗಳ್ಳರ ಹಾವಳಿ ಹೆಚ್ಚಾದ ಹಿನ್ನೆಲೆ ಹಸುಗಳು ಹೆಚ್ಚಾಗಿ ಮಲುಗಿದ್ದ ಜಾಗದ ಅಕ್ಕಪಕ್ಕದ ಮನೆಗಳಿಗೆ ಮನವಿ ಮಾಡಿಕೊಂಡು ಆಟೋ ಚಾಲಕರು ಸಿಸಿ ಟಿವಿ ಹಾಕಿಸಿದ್ದಾರೆ. ದನಗಳ್ಳರು ಒಂದೊಂದು ಬಾರಿ ಒಂದೊಂದು ವಾಹನಗದಲ್ಲಿ ಬಂದು ಹಸುಗಳನ್ನ ಕದಿಯಲು ಮುಂದಾಗುತ್ತಿದ್ದಾರೆ. ಸ್ಕಾರ್ಪಿಯೋ, ಓಮಿನಿ, ಮಹೇಂದ್ರಾ ಮ್ಯಾಕ್ಸಿಮಾ ಗಾಡಿಗಳಲ್ಲೇ ಹೆಚ್ಚಾಗಿ ಬರುತ್ತಿದ್ದಾರೆ. ಗಾಡಿಗಳು ಬರುವ 10 ನಿಮಿಷದ ಮುಂಚೆ ಒಂದು ಸ್ಕೂಟಿ ಒಂದು ಬುಲೆಟ್ ಬೈಕ್ ಬರುತ್ತವೆ. ಆ ಎರಡು ಬೈಕ್ ಬಂದ 10 ನಿಮಿಷಕ್ಕೆ ಬೀದಿ ದೀಪಗಳು ಆಫ್ ಆಗುತ್ತೆ. ತಕ್ಷಣ ಬರುವ ಗಾಡಿಗಳು ರಾಸುಗಳನ್ನ ತುಂಬಿಕೊಂಡು ಹೋಗುತ್ತವೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹಾಗಾಗಿ, ಸ್ಥಳಿಯರು ನಾವು ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ. ನಾವೇ ರಾತ್ರಿ ವೇಳೆಯಲ್ಲಿ ಕಾಯುತ್ತೇವೆ ಅಂತಿದ್ದಾರೆ. ಹಸುಗಳ ಕಳ್ಳತನಕ್ಕೆ ಬರುವುದು ಗುರುವಾರ ರಾತ್ರಿಯೇ ಹೆಚ್ಚು ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಮೊನ್ನೆ ಕೂಡ ಬಂದ ಕಳ್ಳರು ರಾಸುಗಳನ್ನ ಕಂಟ್ರೋಲ್ ಮಾಡಲಾಗದೆ ಬಿಟ್ಟು ಹೋಗಿದ್ದಾರೆ. ಈ ವೇಳೆ, ನಾಯಿಗಳು ಹಾಗೂ ರಾಸುಗಳ ಕೂಗಿನಿಂದ ಸ್ಥಳಿಯರು ಓಡಿ ಬಂದಿದ್ದಾರೆ. ಆಗ ದನಗಳ್ಳರು ರಾಸುಗಳನ್ನ ಬಿಟ್ಟು ಓಡಿ ಹೋಗಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g