ಹಳೆ ದ್ವೇಷಕ್ಕೆ ವ್ಯಕ್ತಿಯ ಹೆಬ್ಬೆರಳು ಕಟ್ ಮಾಡಿದ ಭೂಪ
1 min read
ಚಿಕ್ಕಮಗಳೂರು : ಹಳೆ ದ್ವೇಷಕ್ಕೆ ಯುವಕನೊಬ್ಬ ವ್ಯಕ್ತಿಯ ಹೆಬ್ಬೆರಳು ಕಟ್ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸಗನಿಪುರ ಗ್ರಾಮದಲ್ಲಿ ನಡೆದಿದೆ. ಯುವಕ ಲಾಂಗು ಬೀಸಿದ ರಭಸಕ್ಕೆ ಸಗನಿಪುರ ಗ್ರಾಮದ ಕುಮಾರಸ್ವಾಮಿ ಎಂಬುವರ ಹೆಬ್ಬೆರಳು ತುಂಡಾಗಿದೆ. ಇನ್ನು ಹೆಬ್ಬೆರಳು ಕಳೆದುಕೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ನರಳಾಡುತ್ತಿದ್ದಾರೆ. ಇನ್ನು ಅದೇ ಗ್ರಾಮ ಕೌಶಿಕ್ ಎಂಬ ಯುವಕ ಹುಚ್ಚಾಟ ಮೆರೆದು ಲಾಂಗ್ ಬೀಸಿದ್ದಾನೆ. ಮದ್ಯದ ಅಮಲಿನಲ್ಲಿ ಬಂದು ಹಲ್ಲೆ ಮಾಡಿದಾನೆಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಇನ್ನು ಕೌಶಿಕ್ ಫೇಸ್ಬುಕ್ ವಾಟ್ಸಪ್ ನಲ್ಲೂ ಲಾಂಗು, ಮಚ್ಚು, ಚೈನು ಹಿಡಿದು ಫೋಸ್ ನೀಡಿರುವ ಪೋಟೋ ಸದ್ಯ ಎಲ್ಲೆಡೆ ವೈರಲ್ ಆಗ್ತಿವೆ. ಇನ್ನು ಜೀವ ರಕ್ಷಣೆಗಾಗಿ ಕುಮಾರಸ್ವಾಮಿ ಪೊಲೀಸರ ಮೊರೆ ಹೋಗಿದ್ದು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g