May 20, 2024

MALNAD TV

HEART OF COFFEE CITY

ನೋಡುಗರು ನಿಬ್ಬೆರಗಾಗುವಂತೆ ಶಂಕರಾಚಾರ್ಯಳಾದ 2ನೇ ತರಗತಿ ಬಾಲಕಿ….!

1 min read

ಚಿಕ್ಕಮಗಳೂರು : ಈ ಚಿತ್ರವನ್ನ ನೋಡಿದ್ರೆ ಸಾಕು ಥೇಟ್ ಆದಿಶಂಕರಚಾರ್ಯರೇ ಧ್ಯಾನದ ಭಂಗಿಯಲ್ಲಿ ಕುಳಿತಿದ್ದಾರೆ ಅನ್ನೋದು ಎಲ್ಲರಿಗೂ ಖಾತ್ರಿಯಾಗುತ್ತೆ. ಅಷ್ಟೊಂದು ವಿನಮ್ರವಾಗಿ, ಅಧ್ಯಾತ್ಮಿಕವಾಗಿ ಧ್ಯಾನಸ್ಥರಾಗಿ ಕುಳಿತಿರುವ ಶಂಕರಚಾರ್ಯರ ಈ ಪೋಟೋ ಎಂಥವರನ್ನ ಕೂಡ ತನ್ನತ್ತ ಸೆಳೆಯುತ್ತದೆ. ಅಷ್ಟೇ ಅಲ್ಲ, ಶಂಕರಚಾರ್ಯರ ಅಕ್ಕ ಪಕ್ಕದಲ್ಲಿ ಕುಳಿತಿರುವ ನಾಲ್ವರು ಗುರುಗಳನ್ನ ನೋಡಿದ್ರೂ ಭಕ್ತಿಭಾವ ಮೂಡುತ್ತೆ. ಆದ್ರೆ ಇದು ನಿಜಕ್ಕೂ ಶಂಕರಚಾರ್ಯರ ಚಿತ್ರನಾ..? ಅಂತಾ ಕೇಳಿದ್ರೆ ಖಂಡಿತಾ ಅಲ್ಲ, ಯಾರೋ ಇಟ್ಟಿರುವ ಪೋಟೋ ಫ್ರೇಮ್ ಕೂಡ ಅಲ್ಲ. ಬದಲಾಗಿ ಛದ್ಮವೇಷ ಸ್ಪರ್ಧೆಯಲ್ಲಿ 2ನೇ ತರಗತಿಯ ಪುಟಾಣಿಯೊಬ್ಬಳು ತಾನೇ ಶಂಕರಚಾರ್ಯರ ರೂಪದಲ್ಲಿ ಕಾಣಿಸಿಕೊಂಡು ಎಲ್ಲರೂ ನಿಬ್ಬೆರಾಗುವಂತೆ ಮಾಡಿದ್ದಾಳೆ. ಹೌದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನರಸೀಪುರ ಗ್ರಾಮ ಪಂಚಾಯ್ತಿಯ ಬೆಳಗೊಳ ಶಾಲೆಯ ವಿದ್ಯಾರ್ಥಿನಿ, ಆದ್ವಿ, ಶಂಕರಚಾರ್ಯಳಾಗಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದ್ದಾಳೆ. ಪೀಠದಲ್ಲಿ ಕುಳಿತಿರುವ ಭಂಗಿ, ಆಕೆಯ ಹಾವಭಾವ ಎಲ್ಲವನ್ನ ನೋಡಿದಾಗ ಥೇಟ್ ಶಂಕರಚಾರ್ಯರೇ ಧ್ಯಾನದಲ್ಲಿ ಕುಳಿತಿದ್ದಾರೆ ಅಂತಾ ಅನ್ನಿಸದೇ ಇರದು. ಅಷ್ಟೊಂದು ಪ್ರಬುದ್ಧವಾಗಿ, ಮನೋಜ್ಞವಾಗಿ ಪುಟಾಣಿ, ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿರೋದು ಎಲ್ಲರನ್ನೂ ಮನಸೂರೆಗೊಂಡಿದೆ. ಅಲ್ಲದೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಮುಂದಿನ ಹಂತಕ್ಕೂ ಆದ್ವಿ ಆಯ್ಕೆಯಾಗಿದ್ದಾಳೆ. ಹರೀಶ್ ಬಿ.ಎಂ ಹಾಗೂ ಸುನೀತಾ ದಂಪತಿಯ ಪುತ್ರಿಯಾಗಿರುವ ಆದ್ವಿಗೆ ಶಾಲೆಯ ಶಿಕ್ಷಕರು, ಸ್ಥಳೀಯರು, ವಿದ್ಯಾರ್ಥಿಗಳು ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!