April 27, 2024

MALNAD TV

HEART OF COFFEE CITY

ಅ.13 ರಂದು ಶ್ರೀ ಗುರು ಶರಣ ಹೂವಾಡಿಗ ಮಾದಣ್ಣನವರ 6 ನೇ ವರ್ಷದ ಜಯಂತ್ಯೋತ್ಸವ

1 min read

ಚಿಕ್ಕಮಗಳೂರು : ರಾಜ್ಯ ಮಟ್ಟದ ಶ್ರೀ ಗುರು ಶರಣ ಹೂವಾಡಿಗ ಮಾದಣ್ಣನವರ 6 ನೇ ವರ್ಷದ ಜಯಂತ್ಯೋತ್ಸವನ್ನು ಅ. 13 ರಂದು ಕುವೆಂಪು ಕಲಾ ಮಂದಿರದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾ ಹೂವಾಡಿಗ ಸಂಘ ಅಧ್ಯಕ್ಷ ಸಿ.ಆರ್ ರಘು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಕ್ಟೋಬರ್ 13 ರಂದು ರಾಜ್ಯ ಮಟ್ಟದ ಶ್ರೀ ಗುರು ಶರಣ ಹೂವಾಡಿಗ ಮಾದಣ್ಣನವರ 6 ನೇ ವರ್ಷದ ಜಯಂತ್ಯೋತ್ಸವನ್ನು ಕುವೆಂಪು ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದು, ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 7-30 ಕ್ಕೆ ಅಲಂಕೃತ ಹೂವಿನ ಮಂಟಪದಲ್ಲಿ ಶ್ರೀ ಗುರು ಶರಣ ಹೂವಾಡಿಗ ಮಾದಣ್ಣನವರ ಭಾವಚಿತ್ರವನ್ನು ತಾಲ್ಲೂಕು ಕಛೇರಿಯಿಂದ ಎಂ.ಜಿ ರಸ್ತೆ ಮೂಲಕ ಕುವೆಂಪು ಕಲಾಮಂದಿರದವರೆಗೆ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ಕಾರ್ಯಕ್ರಮದ ಸಾನಿಧ್ಯವನ್ನು ಶರಣ ಹೂಗಾರ ಮಾದಯ್ಯನವರ ಮಹಾಶಕ್ತಿ ಪೀಠದ ಪರಮ ಪೂಜ್ಯ ಶ್ರೀ ಗುರು ರಾಜೇಂದ್ರ ಶಿವಯೋಗಳು ವಹಿಸಿಕೊಳ್ಳುವರು. ಕಾರ್ಯಕ್ರಮದಲ್ಲಿ ನಮ್ಮ ಸಮುದಾಯದ ಉಪಪಂಗಡಗಳಾದ ಹೂವಾಡಿಗ, ಹೂಗಾರ್, ಗುರವ್, ಮಾಲೇಗಾರ, ಸುಖಾರಿ, ಪುಷ್ಪಮಾಲಿ, ಮಾಲಿ, ಪುಲಾರಿ ಸಮುದಾಯಗಳನ್ನು ಒಟ್ಟುಗೂಡಿಸುವುದಾಗಿದೆ. ಹಿಂದುಳಿದ ವರ್ಗಗಳ 2ಎ ಗುಂಪಿನಲ್ಲಿ ಅತ್ಯಂತ ಚಿಕ್ಕ ಸಮುದಾಯವಾದ ನಮ್ಮ ಸಮುದಾಯವನ್ನು ಸರ್ಕಾರವು ಕಡೆಗಣಿಸಿದ್ದು, ನಮ್ಮ ಸಮಾಜದ ಬಂಧುಗಳು ಎಲ್ಲಾ ಕ್ಷೇತ್ರದಲ್ಲಿ ಮುಂದುವರೆಯಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯ ಮಂಡನೆ ಮಾಡಲಾವುದು. ಅಲ್ಲದೆ ಇದೇ ವೇಳೆ ಸಮಾಜದ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ, ಮಕ್ಕಳಿಂದ ನೃತ್ಯ ಕಾರ್ಯಕ್ರವನ್ನು ಆಯೋಜಿಸಲಾಗಿದೆ, ಎಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಹೂವಾಡಿಗ ಸಂಘ ಅಧ್ಯಕ್ಷ ಆನಂದ್, ಕಾರ್ಯದರ್ಶಿ ಸಿ.ಡಿ. ವಿನಯ್, ಉಪಾಧ್ಯಕ್ಷ ಶಂಭುಲಿಂಗಪ್ಪ, ಸಹ ಕಾರ್ಯದರ್ಶಿ ಮನು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!