ಭಿಕ್ಷುಕಿ ಅಜ್ಜಿಯಿಂದ ದೇವಾಸ್ಥಾನಕ್ಕೆ- 20 ಸಾವಿರ ದೇಣಿಗೆ
1 min readಕಡೂರು. ಬಿಕ್ಷುಕಿ ವೃದ್ಧೆಯೊಬ್ಬರು 20 ಸಾವಿರ ಹಣವನ್ನ ದೇವಾಸ್ಥಾನಕ್ಕೆ ದೇಣಿಗೆ ನೀಡುವ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದಲ್ಲಿ ನಡೆದಿದೆ. ಕಡೂರು ಪಟ್ಟಣದ ಪಾತಾಳ ಆಂಜನೇಯ ಸ್ವಾಮಿ ದೇವಾಲಯಕ್ಕೆ 80 ವರ್ಷದ ವೃದ್ಧೆ 20000 ಹಣ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕೋಟೆ ಬಡಾವಣೆಯಲ್ಲಿರುವ ಪಾತಾಳ ಅಂಜನೇಯಸ್ವಾಮಿ ನೂತನ ದೇವಾಲಯದ ಪ್ರವೇಶ ವಿಗ್ರಹ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಇತ್ತೀಚಿಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು.
ಇದೇ 17 ರಂದು 80 ವರ್ಷದ ಕೆಂಪಜ್ಜಿ ಧಾರ್ಮಿಕ ಕಾರ್ಯ ವನ್ನು ದೇವಾಲಯದ ಹೊರಗಡೆಯಿಂದ ವೀಕ್ಷಿಸಿತ್ತಿದ್ರು.ಅಜ್ಜಿ ಭಿಕ್ಷೆ ಬೇಡಲು ಬಂದಿದ್ದಾರೆ ಅಂದುಕೊಂಡ ಭಕ್ತರು ಅಜ್ಜಿ ಯನ್ನ ಅಲ್ಲಿದ್ದ ಹೊರ ಹೋಗುವಂತೆ ಸೂಚಿಸಿದ್ದಾರೆ.ಇಲ್ಲ ನಾನು ದೇವಾಸ್ಥಾಕ್ಕೆ ಹಣ ಕೊಡೋಕೆ ಬಂದಿದ್ದೀನಿ, ಅಧ್ಯಕ್ಷರು ಎಲ್ಲಿದ್ದಾರೆ ಹೇಳಿ ಅವರ ಕೈಗೆ ಹಣ ಕೊಡಬೇಕು ಎಂದಾಗ ಜನರು ಶಾಕ್ ಗೆ ಒಳಗಾಗಿದ್ದಾರೆ. ಆಮೇಲೆ 20000 ಹಣವನ್ನು ಅಲ್ಲಿದ್ದ ಸ್ವಾಮೀಜಿ ಕೈಗೆ ಕೊಟ್ಟು ಬಂದಿದ್ದಾರೆ. ಅಜ್ಜಿಯ ಕಾರ್ಯವನ್ನ ಶ್ಲಾಘಿಸಿದ ಜನರು ಅಜ್ಜಿ ಜೊತೆ ಸೆಲ್ಫಿ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g