May 20, 2024

MALNAD TV

HEART OF COFFEE CITY

ಹೆತ್ತಮ್ಮನನ್ನೆ ಕಗ್ಗೊಲೆ ಮಾಡಿದ ಮಗ

1 min read

ಚಿಕ್ಕಮಗಳೂರು..: ಸ್ವಂತ ಮಗನಿಂದಲೇ ಹೆತ್ತಮ್ಮನ ಕಗ್ಗೊಲೆ ಮಾಡಿರೋ ಘಟನೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆಯಲ್ಲಿ ನಡೆದಿದೆ.

ನಗರದ ಗೌರಿ ಕಾಲುವೆ ನಿವಾಸಿ 48 ವರ್ಷದ ಸುಧಾ ಕೊಲೆಯಾದ ಮೃತ ತಾಯಿಯಾಗಿದ್ದು. 28 ವರ್ಷದ ದುಶ್ಯಂತ್ ಕೊಲೆಗೈದ ಪುತ್ರನಾಗಿದ್ದಾನೆ. ಮಧ್ಯಾಹ್ನದ ವೇಳೆಗೆ ತಾಯಿಯನ್ನ ಕೊಲೆ ಮಾಡಿರುವ ಸಾಧ್ಯತೆ ಇದ್ದು ಕೊಲೆ ಮಾಡಿ ಮನೆಯಲ್ಲಿ ಶವದ ಜೊತೆ ಕುಳಿತಿದ್ದ ಎನ್ನಲಾಗಿದೆ. ಸಂಜೆ 5.45ಕ್ಕೆ ಕಿರಿಯ ಪುತ್ರ ಸಂತೋಷ್ ಮನೆಗೆ ಬಂದಾಗ ತಾಯಿ ಕೊಲೆಯಾಗಿರೋದು ಬೆಳಕಿಗೆ ಬಂದಿದೆ. ಒಮ್ಮೊಮ್ಮೆ ಪುತ್ರ ದುಶ್ಯಂತ್ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂದು ಹೇಳಲಾಗಿದ್ದು. ಕೊಲೆಮಾಡಿದ ಮಗ ದುಶ್ಯಂತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಬಸವನಹಳ್ಳಿ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ‌.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!