ಕುರಿ, ಕೋಳಿ ಮಾಂಸದಂಗಡಿ ಸ್ಥಳಾಂತರ ಚಿಂತನೆ: ಬಿ.ಸಿ.ಬಸವರಾಜ್
1 min readಚಿಕ್ಕಮಗಳೂರು: ಸ್ವಚ್ಛತೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ವಿವಿಧೆಡೆಗಳಲ್ಲಿರುವ ಕುರಿ, ಕೋಳಿ ಮಾಂಸದ ಅಂಗಡಿಗಳನ್ನು ಮಾರ್ಕೇಟ್ ರಸ್ತೆಯ ಒಂದೆ ಡೆಗೆ ತರುವ ನಿಟ್ಟಿನಲ್ಲಿ ನಗರಸಭೆ ಮುಂದಿನ ಸಭೆಯಲ್ಲಿ ನಿರ್ಣಾಯ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು.
ಶುಕ್ರವಾರ ನಗರದ ಮಾಕೇರ್ಟ್ ರಸ್ತೆಯಲ್ಲಿರುವ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಾರ್ಕೆಟ್ ರಸ್ತೆಯಲ್ಲಿ ನಗರಸಭೆಗೆ ಸೇರಿದ 14 ಮಳಿಗೆ ಗಳು ಖಾಲಿ ಇದ್ದು, ಆ ಪೈಕಿ ಮೊದಲ ಹಂತದಲ್ಲಿ 4 ಮಳಿಗೆಗಳು ಹರಾಜಾಗಿದ್ದವು ಇದೀಗ 2ನೇ ಬಾರಿಗೆ ಹರಾಜು ಪ್ರಕ್ರಿಯೆ ನಡೆಸಿದ್ದು 3 ಮಳಿಗೆಗಳು ಹರಾಜು ಮೂಲಕ ವಹಿಸಿ ಕೊಂಡಿದ್ದಾರೆ. ಬಾಕಿ 11 ಮಳಿಗೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಸುವ್ಯವಸ್ಥಿತವಾಗಿಸುವ ನಿಟ್ಟಿನಲ್ಲಿ ನಗರದ ವಿವಿಧೆಡೆಗಳಲ್ಲಿರುವ ಕುರಿ-ಕೋಳಿ ಮಾಂಸದ ಅಂಗಡಿಗಳನ್ನು ನಗರದ ಮಾರ್ಕೆಟ್ ರಸ್ತೆ ಯಲ್ಲಿ ಒಂದೆಡೆಗೆ ತರುವ ಚಿಂತನೆ ಇದೆ. ಈ ಸಂಬಂಧ ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ನಗರಸಭೆ ಕೆಲವು ಮಳಿಗೆಗಳು ಶಿಥಿಲಾವಸ್ಥೆಯಲ್ಲಿರುವ ಕಾರಣ ಹರಾಜುಗೊಂಡಿಲ್ಲ, ಈ ನಿಟ್ಟಿನಲ್ಲಿ ಅವುಗಳನ್ನು ದುರಸ್ಥಿಗೊಳಿಸಿ, ಯುಜಿಡಿ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಮಾಂಸದ ಅಂಗಡಿಗಳಲ್ಲಿನ ತ್ಯಾಜ್ಯವನ್ನು ಚರಂಡಿ ಮತ್ತಿತರ ಕಡೆಗಳಲ್ಲಿ ಸುರಿದು ನಗರವನ್ನು ಮಲೀನಗೊಳಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಈ ಸಂಬಂಧವಾಗಿ ರಾಮನ ಹಳ್ಳಿಯಲ್ಲಿ ಕೋಳಿ ತ್ಯಾಜ್ಯವನ್ನು ಚರಂಡಿಗೆ ತಂದು ಸುರಿಯುತ್ತಿದ್ದ ಹಿನ್ನಲೆ ವ್ಯಕ್ತಿಯೊಬ್ಬನ ಅಂಗಡಿಯನ್ನು ಸೀಜ್ ಮಾಡಲಾಗಿದೆ. ಸ್ವಚ್ಛತೆಯನ್ನು ಹಾಳು ಮಾಡುವವರು ಕಂಡು ಬಂದ ಲ್ಲಿ ನಗರಸಭೆಗೆ ಮಾಹಿತಿ ನೀಡಿದಲ್ಲಿ ಸೂಕ್ತ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಯಾವುದೇ ಅನಧೀಕೃತವಾಗಿ ಕಟ್ಟಡ ನಿರ್ಮಾಣಗೊಳ್ಳುತ್ತಿಲ್ಲ, ಈ ಸಂಬಂಧವಾಗಿ ಮಾಹಿತಿ ಇದ್ದಲ್ಲಿ ನಗರಸಭೆಗೆ ತಿಳಿಸಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಇನ್ನು ತ್ಯಾಜ್ಯ ವನ್ನು ಆಟೋ ಟಿಪ್ಪರ್ಗಳಿಗೆ ನೀಡದೆ ಎಲ್ಲೆಂದರೆಲ್ಲಿ ಎಸೆಯುತ್ತಿರುವ ಬಗ್ಗೆ ದೂರುಗಳಿದ್ದು, ಅಂತವರ ಮನೆಗೆ ನಗರಸಭೆಯಿಂದ ನೀಡಲಾಗುವ ಮೂಲಭೂತ ಸೌಕರ್ಯಗಳನ್ನು ರದ್ದು ಗೊಳಿಸಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ರಾಜು, ಎ.ಸಿ.ಕುಮಾರ್, ಕಂದಾಯಾಧಿಕಾರಿ ಬಸವರಾಜ್, ಸ್ಯಾನಿಟೈಸರಿ ಸೂಪರ್ವೈಸರ್ ಅಣ್ಣಯ್ಯ, ವ್ಯವಸ್ಥಾಪಕ ಸಿಬ್ಬಂದಿಗಳು ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g