May 20, 2024

MALNAD TV

HEART OF COFFEE CITY

ನಗರದಲ್ಲಿ ವಾರ್ಡ್‍ಗಳ ಅಭಿವೃದ್ಧಿಗೆ ಹೆಚ್ಚಿನ ಗಮನ: ವರಸಿದ್ಧಿ

1 min read

ಚಿಕ್ಕಮಗಳೂರು: ನಗರದ ಎಲ್ಲಾ ವಾರ್ಡ್‍ಗಳಲ್ಲಿಯೂ ಒಂದಲ್ಲ ಒಂದು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಲ್ಲಾ ಕಾಮಗಾರಿಗಳು ಶೀಘ್ರದಲ್ಲೆ ಪೂರ್ಣಗೊಂಡು ನಗರವನ್ನು ಸುಂದರವಾಗಿ ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.

ನಗರದ 21ನೇ ವಾರ್ಡ್‍ನ ಅಂಡೆಛತ್ರದ ಅಂಜುಮಾನ್ ರಸ್ತೆ ಡಾಂಬರೀಕರಣ ಕಾರ್ಯಕ್ಕೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಚಾಲನೆ ನೀಡಿ ಮಾತನಾಡಿ, ಸುಮಾರು 12 ವರ್ಷಗಳಿಂದ ಅಂಜುಮಾನ್ ರಸ್ತೆ ಡಾಬರೀಕರಣ ಆಗದೆ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತಿತ್ತು, ಶಾಸಕರ ಬಳಿ ಚರ್ಚಿಸಿ ಶಾಸಕರ ವಿಶೇಷ ಅನುದಾನದಲ್ಲಿ ನಗರದ ಅಂಜುಮಾನ್ ರಸ್ತೆ ಡಾಂಬರೀಕರಣಗೊಳ್ಳುತ್ತಿದೆ. ಅಭಿವೃದ್ಧಿ ಕುರಿತು ಸದಾ ಆಡಳಿತ ಪಕ್ಷವನ್ನು ಟೀಕಿಸುತ್ತಿದ್ದ ವಿಪಕ್ಷಗಳಿಗೆ ಈ ಮೂಲಕ ತಕ್ಕ ಉತ್ತರ ನೀಡಲಾಗಿದೆ ಮುಂದಿನ ದಿನಗಳಲ್ಲಿ ನಗರ ಮತ್ತು ಉದ್ಯಾನವನ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ನಗರಸಭೆ ಸದಸ್ಯ ವಿಪುಲ್‍ಕುಮಾರ್ ಜೈನ್ ಮಾತನಾಡಿ, 12 ವರ್ಷಗಳಿಂದ ರಸ್ತೆಕಾಮಗಾರಿ ನೆಡೆದಿರಲಿಲ್ಲ. ನಾವು ನೂತನ ನಗರಸಭೆ ಸದಸ್ಯರಾದ ಮೇಲೆ ಶಾಸಕರು ಮತ್ತು ನಗರಸಭೆ ಅಧ್ಯಕ್ಷರ ಬಳಿ ಚರ್ಚಿಸಿ 21ನೇ ವಾರ್ಡಿಗೆ ವಿಶೇಷ ಅನುದಾನವನ್ನು ನೀಡಿ ವಾರ್ಡ್‍ನ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ಬೀದಿ ದೀಪಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತೇವೆ ಎಂದರು.

ಮಾಜಿ ನಗರಸಭೆ ಅಧ್ಯಕ್ಷ ಅಕ್ಬರ್, ಮಾಜಿ ಉಪಾಧ್ಯಕ್ಷ ಗೌತಮ್‍ಸಿಂಗ್ ಜೈನ್, ಇಂಜಿನಿಯರ್ ಚಂದನ್, ಸ್ಥಳೀಯರಾದ ಬಾಬುಲಾಲ್, ಎಸ್.ಡಿ.ಎಂ ಮಂಜು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!