May 20, 2024

MALNAD TV

HEART OF COFFEE CITY

ಅಕ್ರಮ ಮರ ಕಡಿತಲೆ ಆರೋಪ, ಕಾಂಗ್ರೆಸ್ ಪ್ರತಿಭಟನೆ

1 min read

 

ಚಿಕ್ಕಮಗಳೂರು: ರಾಮನಹಳ್ಳಿ ನೀರು ಶುದ್ದೀಕರಣದ ಘಟಕದ ಆವರಣದಲ್ಲಿ ಹಾಡು ಹಗಲೇ ಮರಗಳ್ಳತನ ಆಗುತ್ತದೆ ಎಂದರೆ ಅಕಾರಿಗಳ ಪಾತ್ರ ಏನು? ನಗರಸಭೆ ಆಯುಕ್ತರು ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವಂತೆ ಕಾಣುತ್ತಿದೆ.ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಆರೋಪಿಸಿದರು.ನಗರದ ರಾಮನಹಳ್ಳಿ ನೀರು ಶುದ್ದೀಕರಣದ ಘಟಕದ ಆವರಣದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಹಾಡು ಹಗಲೇ ಮರಗಳ್ಳತನ ಆಗುತ್ತದೆ ಎಂದರೆ ಅಕಾರಿಗಳ ಪಾತ್ರ ಏನು? ನಗರಸಭೆ ಆಯುಕ್ತರು ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವಂತೆ ಕಾಣುತ್ತಿದೆ. ಇಲ್ಲಿನ ಶಾಸಕರು ರಕ್ಷಕರಾಗದೆ ಶೋಷಕರಾಗಿದ್ದಾರೆ. ಹೀಗಾಗಿ ಸರಕಾರಿ ಆಸ್ತಿ ಲೂಟಿಯಾಗುತ್ತಿದೆ. ಈ ಪ್ರಕರಣದ ತಪ್ಪಿತಸ್ಥರಿಗೆ ಕ್ರಮವಾಗದಿದ್ದರೆ ನಿರಂತರ ಹೋರಾಟ ನಡೆಯಲಿದೆ ಎಂದರು.

ನಗರ ಹೃದಯ ಭಾಗದಲ್ಲಿ ಮರಗಳನ್ನು ಕಡಿಯುವಾಗ ಅರಣ್ಯ,ಪೋಲಿಸ್ಇಲಾಖೆ ಏನು ಮಾಡುತ್ತಿದ್ದವು ಎಂದು ಪ್ರಶ್ನಿಸಿ ಈ ಬಗ್ಗೆ ಸ್ಪಷ್ಟನೆ ನೀಡಲು ಡಿಎಫ್‍ಒ ಸ್ಥಳಕ್ಕಾಗಮಿಸಬೇಕು ಎಂದು ಪಟ್ಟು ಹಿಡಿದು ಕುಳಿತರು. ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ಒಬ್ಬ ರೈತ ಮರದ ಕೊಂಬೆಯೊಂದನ್ನು ಕಡಿದರೆ ಅವರನ್ನು ಜೈಲಿಗೆ ಹಾಕಿಸುವ ಪರಿಸರವಾದಿಗಳು ಈಗ ಇಲ್ಲಿ 60-70 ಮರಗಳನ್ನು ಕಡಿದಿರುವಾಗ ಅವರ ಎಲ್ಲಿಗೆ ಹೋಗಿದ್ದಾರೆ.ಅವರೇಕೆ ಈಗ ಉಸಿರಾಡುತ್ತಿಲ್ಲ ಎಂದು ಕಿಡಿಕಾರಿದರು. ಇಲ್ಲಿನ ನಗರಸಭೆ ಆಯುಕ್ತರು ಕಾನೂನು ಕೈಗೆತ್ತಿಕೊಂಡು ಯಾವ ಇಲಾಖೆಯ ಅನುಮತಿಯನ್ನೂ ಪಡೆಯದೆ ಮರ ಕಡಿದಿದ್ದಾರೆ.ಹೀಗಾಗಿ ಅವರು ಮತ್ತು ನಗರಸಭೆ ಅಧ್ಯಕ್ಷನ ವಿರುದ್ಧ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು.

ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ರೇಖಾಹುಲಿಯಪ್ಪಗೌಡ ಮಾತನಾಡಿ, ನಗರವನ್ನು ಹಸಿರು, ಸುಂದರ ಮಾಡುತ್ತೇವೆ ಎಂದು ಹೇಳುವ ನಗರಸಭೆಯೇ ಮರಗಳನ್ನು ಕಡಿದಿದೆ.ನೀವು ಮಾಡಿದ್ದೇ ಕಾನೂನು ಆಡಿದ್ದೇ ಆಟವಾ ಎಂದು ಟೀಕಿಸಿದರು. ಸ್ಥಳಕ್ಕಾಗಮಿಸಿದ ಡಿಎಫ್‍ಒ ಕ್ರಾಂತಿ ಅವರು ಮರ ಕಡಿದವರ ಮೇಲೆ ಈಗಾಗಲೇ ಅರಣ್ಯ ಕಾಯಿದೆ ಪ್ರಕಾರ ಕೇಸು ದಾಖಲು ಮಾಡಿದ್ದೇವೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೊಪ್ಪದ ಪ್ರತಿಭಟನಾ ಕಾರರು ಒಬ್ಬ ಕೂಲಿಕಾರ್ಮಿಕನ ಮೇಲೆ ಕೇಸು ಹಾಕಿರುವುದು ನಿಮ್ಮ ಬೇಜವಾಬ್ದಾರಿತನ ತೋರಿಸುತ್ತದೆ. ನೈಜ ಆರೋಪಿಗಳ ವಿರುದ್ಧ ಕೇಸು ಹಾಕದಿದ್ದರೆ ಬುಧವಾರ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.ಮುಖಂಡರಾದ ಎ.ಎನ್.ಮಹೇಶ್, ಎಂ.ಸಿ.ಶಿವಾನಂದಸ್ವಾಮಿ, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಎಂ.ಎಲ್.ಮೂರ್ತಿ, ಮಂಜೇಗೌಡ, ರಸೂಲ್‍ಖಾನ್, ನಗರಸಭೆ ಕಾಂಗ್ರೆಸ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!