May 20, 2024

MALNAD TV

HEART OF COFFEE CITY

ಶ್ರದ್ದಾ ಭಕ್ತಿಯಿಂದ ನಡೆದ ಕೋದಂಡರಾಮಚಂದ್ರ ಸ್ವಾಮಿ ಬ್ರಹ್ಮರಥೋತ್ಸವ

1 min read

 

ಚಿಕ್ಕಮಗಳೂರು: ನಗರದ ಇತಿಹಾಸ ಪ್ರಸಿದ್ಧ ಹಿರೇಮಗಳೂರು ಕೋದಂಡರಾಮಚಂದ್ರ ಸ್ವಾಮಿ ಬ್ರಹ್ಮರಥೋತ್ಸವ ಇಂದು ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.ಇದಕ್ಕೂ ಮೊದಲು ಬ್ರಹ್ಮರಥೋತ್ಸವದ ಅಂಗವಾಗಿ 6 ಗಂಟೆಗೆ ಸುಪ್ರಬಾತ ಸೇವೆಯನ್ನು ನೇರವೇರಿಸಲಾಯಿತು. ಬಳಿಕ ಸಂಪ್ರದಾಯಿಕವಾಗಿ ಶಾತ್ ಮೊರೈ ಎಂಬ ಪದ್ದತಿಯ ಮೂಲಕ ನಾಲ್ಕು ಸಾವಿರ ಮಂತ್ರ ಪಠಣೆಯನ್ನು ಮಾಡಲಾಯಿತು. ಬಳಿಕ ಕೃಷ್ಣ ಗಂಧೀತ್ವಸ ಮೂಲಕ ದೇವರಿಗೆ ವೇದೋಕ್ತ ಮಂತ್ರ ಪುಷ್ಪದೊಂದಿಗೆ ಕನ್ನಡ ಪೂಜೆ ನೇರವೇರಿಸಲಾಯಿತು.ಬಳಿಕ ಗ್ರಾಮದಲ್ಲಿ ಮೆರವಣಿಗೆ ಮೂಲಕ ದೇವರ ಮೂರ್ತಿ ಸಾಗಿ ಬಳಿಕ ರಥದ ಮೇಲೆ ದೇವರನ್ನು ಕೂರಿಸಲಾಯಿತು. ಈ ವೇಳೆ ಹಲವು ಧಾರ್ಮಿಕ ಕಾರ್ಯ ನೇರವೇರಿದವು, ಬಳಿಕ ರಥೋತ್ಸವ ನಡೆಯಿತು.

* ರಥಕ್ಕೆ ಬೃಹತ್ ಹಾರ ಸಮರ್ಪಣೆ

ದೇವರು ರಥದ ಮೇಲೆ ಕೂತ ಬಳಿಕ ಸಂಪ್ರದಾಯದಂತೆ ಗ್ರಾಮದ ದಲಿತ ಬಂಧುಗಳು ಬೃಹತ್ ಹೂವಿನ ಹಾರವನ್ನು ಮೆರವಣಿಗೆಯ ಮೂಲಕ ದೇವರ ರಥಕ್ಕೆ ಸಮರ್ಪಿಸಿದರು. ಈ ಸಂಪ್ರದಾಯ ಮುಕ್ತಾಯವಾದ ಕೂಡಲೇ ರಥೋತ್ಸವ ಪ್ರಾರಂಭವಾಯಿತು. ರಥ ಬೀದಿಯಲ್ಲಿ ದೇವರು ಸಾಗುವಾಗ ಚಿಟ್ಟಿಮೇಳ, ಗೊಂಬೆ ಕುಣಿತ ಇನ್ನೀತರ ವಾದ್ಯಘೋಷ್ಟಿಗಳು ಮೊಳಗಿದವು

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!