May 20, 2024

MALNAD TV

HEART OF COFFEE CITY

ದಾನಿಗಳು ನೀಡಿದ ಪುಸ್ತಕವನ್ನು ಓದುವ ಮೂಲಕ ಸಾರ್ಥಕಗೊಳಿಸಿ – ಹೆಚ್.ಡಿ. ತಮ್ಮಯ್ಯ

1 min read

ಚಿಕ್ಕಮಗಳೂರು – ದಾನಿಗಳು ನೀಡುವ ಕೊಡುಗೆಗಳು ಸಮರ್ಪಕವಾಗಿ ಬಳಕೆ ಆಗಬೇಕು. ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಮೀನಾ ನಾಗರಾಜ್ ತಿಳಿಸಿದರು.

ಅವರು ಶನಿವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂರು ಶಾಲೆಗಳಿಗೆ ನೂರು ನೂರು ಪುಸ್ತಕ ಯೋಜನೆಯಡಿ ಪುಸ್ತಕಗಳ ವಿತರಣೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಡಳಿತದ ಆಶೋತ್ತರಗಳನ್ನು ಅನುಷ್ಟಾನಕ್ಕೆ ತರಲು ಖಾಸಗಿ ಸಂಘ, ಸಂಸ್ಥೆಗಳು ಕೈಜೋಡಿಸಲು ಮುಂದೆ ಬಂದಾಗ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರೇರಣೆ ಜೊತೆಗೆ ಪ್ರಯತ್ನವೂ ಜಾರಿಗೆ ಬರುತ್ತದೆ ಎಂದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ನೀಡಿರುವ ಪುಸ್ತಕಗಳನ್ನು ಓದುವ ಮೂಲಕ ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಿಂದಿನ ತಲೆಮಾರು ಪುಸ್ತಕ ಓದುವ ಹವ್ಯಾಸ ಕಳೆದುಕೊಂಡಿಲ್ಲ. ಇತ್ತೀಚಿನ ತಲೆಮಾರಿನ ಮಕ್ಕಳು ಓದುವ ಅಭಿರುಚಿ ಕಳೆದುಕೊಂಡಿರಬಹುದು.ಅವರಲ್ಲೂ ಓದುವ ಹವ್ಯಾಸ ಮೂಡಿಸಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಗ್ರಂಥಾಲಯವೊಂದನ್ನು ತೆರೆಯಲು ಸಾಹಿತ್ಯ ಪರಿಷತ್ತಿಗೆ ಸೂಕ್ತ ಕೊಠಡಿಯೊಂದನ್ನು ವ್ಯವಸ್ಥೆಮಾಡಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಜಿಲ್ಲೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಬರಬೇಕು ಎನ್ನುವ ಒತ್ತಾಯವನ್ನು ಮುಖ್ಯಮಂತ್ರಿಗಳಿಗೆ ಮಾಡಿದ್ದೇವೆ. ಈ ವಿಚಾರದಲ್ಲಿ ಶಾಸಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ಇದರಲ್ಲಿ ನೂರು ಶಾಲೆಗೆ ನೂರು ನೂರು ಪುಸ್ತಕ ಎನ್ನುವ ಕಾರ್ಯಕ್ರಮ ಅತ್ಯುತ್ತಮವಾಗಿದೆ. ಇದು ಒಂದು ಜಿಲ್ಲೆಯ 100 ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಮಕ್ಕಳಿಗೆ ಅಗತ್ಯವಾದ 10 ಸಾವಿರ ಪುಸ್ತಕಗಳನ್ನು ಸಂಗ್ರಹಿಸುವ ಕೆಲಸ ಸವಾಲಿನದ್ದು, ಮಕ್ಕಳಿಗೆ ಅಭಿರುಚಿಗೆ ತಕ್ಕ ಪುಸ್ತಕಗಳನ್ನೇ ಆಯ್ಕೆ ಮಾಡಿ ಪ್ರತಿ ಶಾಲೆಗೆ ಹಂಚಲಾಗುತ್ತದೆ ಎಂದರು.

ಇಲ್ಲಿಂದ ಕೊಂಡೊಯ್ಯುವ ಪುಸ್ತಕದ ಬಂಡಲುಗಳನ್ನು ಹಾಗೇ ಇಟ್ಟು ಬಿಡಬಾರದು. ಅದನ್ನು ಬಿಚ್ಚಿ ಮಕ್ಕಳಿಗೆ ತೋರಿಸಿ ಕಪಾಟೊಂದರಲ್ಲಿ ಇಟ್ಟು ಮಕ್ಕಳಿಗೆ ಓದಲು ನೀಡಬೇಕು. ಇವೆಲ್ಲವೂ ಪಠ್ಯೇತರ ಪುಸ್ತಕಗಳಾಗಿವೆ. ಇದರಲ್ಲಿ ವ್ಯಾಕರಣ, ನಿಗಂಟು, ನೀತಿಕತೆಗಳು, ವಿಜ್ಞಾನ, ಮಹಾತ್ಮರ ಕಥೆಗಳಿವೆ ಕನಿಷ್ಠ ವಾರದಲ್ಲಿ ಒಂದು ಅವಧಿ ಇವುಗಳನ್ನು ಮಕ್ಕಳಿಂದ ಓದಿಸುವ ಕೆಲಸ ಆಗಬೇಕು ಎಂದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ರಂಗನಾಥಸ್ವಾಮಿ, ಕಾದಂಬರಿಕಾರ ಎಂ.ಆರ್.ದತ್ತಾತ್ರಿ, ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಎಸ್.ಎಸ್.ವೆಂಕಟೇಶ್, ಜಿ.ಬಿ.ಪವನ್ ಇತರರು ಭಾಗವಹಿಸಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!