May 22, 2024

MALNAD TV

HEART OF COFFEE CITY

ಸರ್ಕಾರ ತಜ್ಞರ ವರದಿ ಫಾಲೋ ಮಾಡಲಿ : ಕಿಮ್ಮನೆ ರತ್ನಾಕರ್

1 min read

ಚಿಕ್ಕಮಗಳೂರು : ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಹಿನ್ನೆಲೆ ತಜ್ಞರು ಕೊಡುವ ವರದಿಯನ್ನ ಸರ್ಕಾರ ಫಾಲೋ ಮಾಡಲಿ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ರು.

ತಜ್ಞರೇ ತಪ್ಪು ವರದಿ ನೀಡಿದರೆ ನಾವೇನು ಮಾಡಲು ಆಗಲ್ಲ, ಸರ್ಕಾರ ತಜ್ಞರ ವರದಿಯ ವಿರುದ್ಧ ಕಾರ್ಯಕ್ರಮಗಳನ್ನ ಮಾಡಬಾರದು, ತಜ್ಞರು ಸಾಮಾನ್ಯ ಅಭಿಪ್ರಾಯ ನೀಡುವುದಿಲ್ಲ, ಫ್ಯಾಕ್ಟ್ ಹೇಳ್ತಾರೆ, ಹಿಂದಿನ ಫಲಿತಾಂಶ ಆಧರಿಸಿ ಮುಂದಾಗೋ ದುರಂತದ ಬಗ್ಗೆ ಅಭಿಪ್ರಾಯ ನೀಡಿರ್ತಾರೆ, ತಜ್ಞರ ವರದಿ ವಿರುದ್ಧ ನಡೆದದ್ದೇ ಈಗಾಗಿರೋ ಅನಾಹುತಗಳಿಗೆ ಕಾರಣ, ಈಗಾಗಿರೋ ಎಲ್ಲಾ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ, ದೇಶಾದ್ಯಂತ ಲಸಿಕಾ ವಿತರಣಾ ಕಾರ್ಯಕ್ರಮವೇ ದೊಡ್ಡ ತಪ್ಪು, ಮೋದಿ ಮಾಡಿದ ತಪ್ಪನ್ನ ರಾಜ್ಯಗಳು ಮಾಡುತ್ತಿವೆ, ಜನಸಂಖ್ಯೆಯಷ್ಟು ಲಸಿಕೆ ಇದ್ಯಾ ಎಂದು ನೋಡಿಕೊಂಡು ಹೇಳಿಕೆ ನೀಡಬೇಕು, ನಾಳೆ ಕೊಡ್ತೀವಿ ಅಂತಾರೆ ಬೆಳಗ್ಗೆ ವ್ಯಾಕ್ಸಿನ್ ಇಲ್ಲ ಅಂತಾರೆ ಎಂದು ವ್ಯಂಗ್ಯವಾಡಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!