ಜಿ.ಟಿ ದೇವೇಗೌಡ ಒಂದು ಸಂಘಟನಾ ಶಕ್ತಿ : ವೈ.ಎಸ್.ವಿ
1 min readಚಿಕ್ಕಮಗಳೂರು : ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಡೂರು ಮಾಜಿ ಶಾಸಕ ವೈ.ಎಸ್.ವಿ ದತ್ತಾ ಜಿ.ಟಿ. ದೇವೇಗೌಡ ಒಂದು ಶಕ್ತಿ, ಜೆಡಿಎಸ್ ನಿಂದ ಹೋದ್ರೆ ನಮ್ಮ ಪಕ್ಷಕ್ಕೆ ನಷ್ಟ, ಎಂದು ಹೇಳಿದರಲ್ಲದೆ, ಜಿ.ಟಿ.ಡಿಯವರಿಗೆ ಸೂಕ್ತ ಆದ್ಯತೆ, ಗೌರವ ಕೊಟ್ಟಿಲ್ಲ ಅಂದ್ರೆ ಅದು ತಪ್ಪು, ಹಿರಿಯರು, ಸಂಘಟನಾ ಶಕ್ತಿ, ಜನತಾ ಪರಿವಾರದಿಂದ ಬಂದ ಅವರ ಮನಸಿಗೆ ನೋವಾಗಿದೆ, ಜಿ.ಟಿ.ಡಿಯವರನ್ನ ಕಡೆಗಣಿಸಿ ಮತ್ಯಾರಿಗೋ ಆದ್ಯತೆ ನೀಡಿ ವೈಭವೀಕರಿಸಿದರೆ ಅವರಿಗೆ ನೋವಾಗುತ್ತೆ, ಜಿ.ಟಿ.ದೇವೇಗೌಡರನ್ನ ಹೋಗಲು ನಾವು ಬಿಡಬಾರದು, ಹಿರಿಯರಾದ ಹೆಚ್.ಡಿ.ದೇವೇಗೌಡರು ಅವರನ್ನ ಕರೆಸಿ ಮಾತನಾಡಬೇಕು, ಅವರ ಮನಸ್ಸಿನ ಭಾವನೆಯನ್ನ ಅರ್ಥ ಮಾಡಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು, ಮೂಲ ಜನತಾ ಪರಿವಾರದಿಂದ ಬಂದವರಾಗಿದ್ದು ನಮ್ಮಲ್ಲೇ ಉಳಿಯುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದ್ರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g