ಅಲ್ಪಸಂಖ್ಯಾತ ಒಡನಾಟ ಹೊಂದಿರೊ ನಮಗೆ ಕಷ್ಟ : ವೈ.ಎಸ್.ವಿ ದತ್ತ
1 min readಚಿಕ್ಕಮಗಳೂರು : ಜೆ.ಡಿ.ಎಸ್ ಪಕ್ಷವು ಎಲ್ಲಿಯವರೆಗೆ ಕಾಂಗ್ರೆಸ್ ಹಾಗೂ ಬಿ.ಜೆ.ಪಿ ಪಕ್ಷಗಳಿಂದ ಸಮಾನ ದೂರ ಕಾಯ್ದುಕೊಂಡು ಇರುತ್ತೋ ಅಲ್ಲಿಯವರೆಗೆ ಪಕ್ಷದ ನಿಲುವು ಹಾಗೂ ನನ್ನ ನಿಲುವು ಒಂದೆ ಆಗಿರುತ್ತದೆ ಎಂದು ಮಾಜಿ ಶಾಸಕ ವೈ.ಎಸ್.ವಿ ದತ್ತ ಅಭಿಪ್ರಾಯಿಸಿದ್ದಾರೆ.
ವೈ.ಎಸ್.ವಿ.ದತ್ತ ಕಾಂಗ್ರೆಸ್ ಸೇರುತ್ತಾರೆಂಬ ವದಂತಿ ಹಿನ್ನೆಲೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಒಡನಾಟ ಹೊಂದಿ ಅವರನ್ನೇ ನೆಚ್ಚಿಕೊಂಡಿರುವ ನಮ್ಮಂಥವರಿಗೆ ತುಂಬಾ ಕಷ್ಟವಾಗುತ್ತದೆ. ನಾವು ಕೋಮುವಾದಿ ಶಕ್ತಿಗಳನ್ನ ವಿರೋಧಿಸಿ, ಜಾತ್ಯಾತೀತ ನಿಲುವಿಗೆ ಕಟಿಬದ್ಧರಾಗಿರೋರು, ಪಕ್ಷದ ಸ್ಟಾಂಡ್ ಎಲ್ಲಿವರೆಗೆ ಸ್ಪಷ್ಟವಾಗಿರುತ್ತೋ ಅಲ್ಲಿವರೆಗೂ ಬೇರೆ ಆಲೋಚನೆ ಇಲ್ಲ, ಪಕ್ಷವು ಎಲ್ಲಿಯವರೆಗೆ ಸಾಮಾಜಿಕ ನ್ಯಾಯ, ಜಾತ್ಯಾತೀತ ತತ್ವಕ್ಕೆ ಬದ್ಧವಾಗಿರುತ್ತೋ ಅಲ್ಲಿವರೆಗೂ ನನ್ನ-ಜೆಡಿಎಸ್ ನಿಲುವು ಒಂದೇ ಎಂದು ಸ್ಪಷ್ಟಪಡಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g