ಪತ್ನಿ ಹುಡುಕಾಡಲು ಮುಂದಾದ ಪತಿ, ಮೂವರಿಗೆ ಕೈಕೊಟ್ಟು ಬಂದವಳು ನಾಲ್ಕನೇ ಪತಿಗೂ ಕೊಟ್ಲು ಕೈ…!
1 min readಚಿಕ್ಕಮಗಳೂರು: ಕಾಫಿನಾಡಿನ ವ್ಯಕ್ತಿಯೋರ್ವ ಜೀವನದಲ್ಲಿ ಮದ್ವೆನೇ ಆಗ್ಬಾರ್ದು ಅನ್ಕೊಂಡಿದ್ದ, ಈ ಮಧ್ಯೆ ತನ್ನ ಅಣ್ಣನ ಒತ್ತಾಯಕ್ಕೆ ಮಣಿದು ಮಹಿಳೆಯನ್ನ ವರಿಸಿಬಿಟ್ಟಿದ್ದ, ಮದ್ವೆ ಆದ್ಮೇಲೆ ಗೊತ್ತಾಗಿದ್ದು ತಾನು ಆಕೆಗೆ ನಾಲ್ಕನೇ ಗಂಡ ಅಂತ..! ಇದನ್ನ ಪ್ರಶ್ನೆ ಮಾಡುತ್ತಲೇ ಆಕೆ ಗಂಡನ ಮನೆಯಿಂದ ಕಾಲ್ಕಿತ್ತಿದ್ದು, ಚಿನ್ನ ಸೇರಿದಂತೆ ಹಣವನ್ನ ದೋಚಿಕೊಂಡು ಹೋಗಿದ್ದಾಳೆ ಸದ್ಯ ಕಾಫಿನಾಡಿನ ವ್ಯಕ್ತಿ ಪತ್ನಿಯನ್ನ ಹುಡ್ಕಿಕೊಡಿ ಅಂತಾ ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ನೆಟ್ಟೇಕೆರೆಹಳ್ಳಿ ಷಡಕ್ಷರಿ ಅಳಲು ತೋಡಿಕೊಳ್ತಿರೋ ವ್ಯಕ್ತಿ. ಷಡಕ್ಷರಿ ಕಳೆದ ಎರಡು ವರ್ಷಗಳ ಹಿಂದೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ರಾಮಚಂದ್ರಪುರ ಗ್ರಾಮದ ಉಷಾ ಎಂಬಾಕೆಯನ್ನ ಮದ್ವೆಯಾಗಿದ್ರು. ಹೀಗೆ ಮದ್ವೆಯಾದ ಮೇಲೆಯೇ ಆಕೆಯ ಒಂದೊಂದೇ ಕಥೆಗಳು ಷಡಕ್ಷರಿಗೆ ಗೊತ್ತಾಯ್ತಂತೆ. ತಾನು ಮದ್ವೆಯಾದ ಉಷಾ ಈಗಾಗಲೇ ಮೂವರೊಂದಿಗೆ ಮದ್ವೆಯಾಗಿ ನನ್ನೊಂದಿಗೆ ನಾಲ್ಕನೇ ಮದ್ವೆ ಮಾಡಿಕೊಂಡಿದ್ದಾಳೆ ಅನ್ನೋ ವಿಚಾರ ಗೊತ್ತಾದ ಕೂಡಲೇ ಆಕೆಯನ್ನ ಷಡಕ್ಷರಿ ಪ್ರಶ್ನೆ ಮಾಡಿದ್ದಾನಂತೆ
. ಅಷ್ಟೇ, ಒಂದು ವಾರದ ಹಿಂದೆ ಷಡಕ್ಷರಿ ಮನೆಯಿಂದ ಉಷಾ ಜೂಟ್ ಆಗಿದ್ದಾಳೆ. ಅಲ್ಲದೇ ಹೀಗೆ ಮನೆಯಿಂದ ಹೋಗ್ಬೇಕಾದ್ರೆ ಚಿನ್ನ, ಹಣವನ್ನ ಎಗರಿಸಿಕೊಂಡು ಹೋಗಿದ್ದಾಳೆ ಅಂತಾ ಪತಿರಾಯ ಷಡಕ್ಷರಿ ಅಳಲು ತೋಡಿಕೊಂಡಿದ್ದಾನೆ..ಉಷಾ ಮನೆಯಿಂದ ಹೋದ ಕೂಡಲೇ ಎಲ್ಲಾ ಕಡೆ ಹೋಗಿ ಹುಡುಕಾಟ ನಡೆಸಿದ್ದೇನೆ. ಆಕೆಯ ತವರು ಮನೆ, ಅಕ್ಕನ ಮನೆ ಎಲ್ಲಿ ಹೋದ್ರು ಆಕೆಯೇ ಸುಳಿವೇ ಇಲ್ಲ ಅನ್ನೋ ಪತಿರಾಯ ಹೇಗಾದ್ರೂ ಮಾಡಿ ಆಕೆಯನ್ನ ಹುಡ್ಕಿಕೊಡಿ ಅಂತಾ ಬೇಡಿಕೊಂಡಿದ್ದಾನೆ. ತನ್ನ ಸ್ವಂತ ಊರು ಬೀಕನಹಳ್ಳಿ, ಈಕೆಯ ವಿಚಾರ ಗೊತ್ತಾದ ಕೂಡಲೇ ಊರಲ್ಲಿ ಇದ್ರೆ ಸರಿಯಾಗಲ್ಲ ಅಂತಾ ಊರಿಂದಲೂ ಬಿಟ್ಟು ಬಂದು ನೆಟ್ಟೇಕೆರೆಹಳ್ಳಿಯಲ್ಲಿ ಜೀವನ ಕಟ್ಕೊಂಡಿದ್ದೆ. ಇದೀಗ ಇಲ್ಲೂ ಕೂಡ ನನ್ನ ಒಂಟಿ ಮಾಡಿ ಆಕೆ ಎಸ್ಕೇಪ್ ಆಗಿದ್ದಾಳೆ, ಏನ್ ಮಾಡೋದು ಗೊತ್ತಾಗ್ತಿಲ್ಲ ಅನ್ನೋದು ಪತಿರಾಯ ಷಡಕ್ಷರಿ ಅಳಲು ತೋಡಿಕೊಂಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g