ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಟಿಕೆಟ್ ಕೊಡಲು ಹಣ ಪಡೆದ್ರಾ ಯೂತ್ ಕಾಂಗ್ರೆಸ್ ಅಧ್ಯಕ್ಷ…. ?
1 min read
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಕಳೆದ ವರ್ಷ ನಡೆದ ಪುರಸಭೆ ಚುನಾವಣೆಯಲ್ಲಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಹಣ ಪಡೆದು ಟಿಕೆಟ್ ಕೊಡಿಸಿದ್ರಾ ಎಂಬ ಅನುಮಾನ ಈಗ ಮೂಡಿದೆ. ಟಿಕೆಟ್ ಆಕಾಂಕ್ಷಿಯ ಸಂಬಂಧಿ ಜೊತೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಮಾತನಾಡಿರೋ ಆಡಿಯೋ ಈಗ ವೈರಲ್ ಆಗಿದ್ದು, ಹಣ ಕೇಳಿರುವುದು ಸ್ಪಷ್ಟವಾಗಿದೆ. ತರೀಕೆರೆ ಪಟ್ಟಣದ 19ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ನೀಡಲು ಹಣದ ಬಗ್ಗೆ ಮಾತನಾಡಿರುವ ಸುಮಾರು ಐದು ನಿಮಿಷದ ಆಡಿಯೋ ಈಗ ಹೊರಬಂದಿದೆ. ಈ ಆಡಿಯೋದಲ್ಲಿ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹೆಸರು ಹೇಳಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ
.ಕಾಂಗ್ರೆಸ್ನಲ್ಲಿ ಎಲ್ಲವೂ ಹೀಗೇನಾ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ. ಆಡಿಯೋದಲ್ಲಿ ಬ್ಯಾಂಕ್ ರಜೆ ಇದೆ. ಈಗ 50 ಸಾವಿರ ನೀಡಿ, ಬೆಳಗ್ಗೆ 50 ಸಾವಿರ ಕೊಡುತ್ತೇವೆ ಎಂದು ಸ್ಪಷ್ಟವಾಗಿ ಮಾತನಾಡಿದ್ದಾರೆ. ಆಗ ಸಂತೋಷ್, ಟಿಕೆಟ್ ಸಿಕ್ಕ ಮೇಲೆ ಹಣ ತಪ್ಪಿಸುವಂತಿಲ್ಲ ಎಂದು ಹೇಳಿದ್ದಾರೆ. ಟಿಕೆಟ್ ಕೊಡ್ಸು ಒಂದಲ್ಲ ಇನ್ನು ಒಂದು ಲಕ್ಷ ಕೊಡುತ್ತೇನೆ ಎಂದು ಟಿಕೆಟ್ಗೆ ಲಕ್ಷಗಟ್ಟಲೇ ಡಿಮ್ಯಾಂಡ್ ಮಾಡಿದ್ದಾರೆ. ಈಗ ಟಿಕೆಟ್ ಕೊಡಿಸುತ್ತೇನೆ. ಮುಂದೆ ನನಗೆ ಹುಡುಗರು ಬೆಂಬಲವಾಗಿ ನಿಲ್ಲಬೇಕು ಎಂದು ಅಧ್ಯಕ್ಷ ಸಂತೋಷ್ ಕೂಡ ಡಿಮ್ಯಾಂಡ್ ಮಾಡಿದ್ದಾರೆ. ಮುಂದೆ ಯಾವುದಾದರೂ ಪ್ರತಿಭಟನೆ ವೇಳೆ ಹುಡುಗರ ಸಾಥ್ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. 50 ಸಾವಿರ ಕೊಟ್ಟಿದ್ದಾರೆ. ನನಗೆ ನೂರಕ್ಕೆ ನೂರರಷ್ಟು ಟಿಕೆಟ್ ಆಗುವುದು ಎಂಬ ನಂಬಿಕೆ ಇದೆ. ಸೀನಣ್ಣನ ಜೊತೆಯೂ ಮಾತನಾಡಿದ್ದೇನೆ ಆಗುತ್ತೆ ಎಂದು ಮಾತನಾಡಿದ್ದಾರೆ. ನಿನ್ನೆ ತಾನೇ ಯೂತ್ ಕಾಂಗ್ರೆಸ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ರೆಬೆಲ್ ಆಗಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲೇ ಹೊಡೆದಾಡಿದ್ದರು. ಜಿಲ್ಲಾ ಕಾರ್ಯಕಾರಣಿ ಸಭೆ ವೇಳೆ ಎರಡು ಗುಂಪುಗಳ ನಡುವೆ ಕಚೇರಿಯಲ್ಲಿ ಮಾರಾಮಾರಿ ನಡೆದಿತ್ತು. ಇದೀಗ, ಗಲಾಟೆ ವಿಷಯ ಹೊರಬರುತ್ತಿದ್ದಂತೆ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರ ಈ ಆಡಿಯೋ ಕೂಡ ವೈರಲ್ ಆಗಿದೆ. ಆದರೆ, ಈ ಬಗ್ಗೆ ಮಾತನಾಡಿರೋ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್, ಆಡಿಯೋ ನನ್ನದ್ದಲ್ಲ. ಈ ಬಗ್ಗೆ ರಾಜ್ಯ ನಾಯಕರ ಗಮನಕ್ಕೆ ತಂದಿದ್ದೇನೆ. ಆಡಿಯೋ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ನೀಡುತ್ತೇನೆ ಎಂದಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g