April 29, 2024

MALNAD TV

HEART OF COFFEE CITY

ಬಜೆಟ್ ನಲ್ಲಿ ಏನಿಲ್ಲ ಏನಿಲ್ಲ ಎಂದಿರುವ ಬಿಜೆಪಿಗರ ತಲೆಯಲ್ಲಿ ಏನೂ ಇಲ್ಲ: ಎಚ್ಎಚ್ ದೇವರಾಜ್

1 min read

ಚಿಕ್ಕಮಗಳೂರು: ರಾಜ್ಯ ಬಜೆಟ್ ಕುರಿತಂತೆ ಏನಿಲ್ಲಾ .. ಏನಿಲ್ಲಾ… ಎಂದಿರುವ ಬಿಜೆಪಿ ಮುಖಂಡರ ತಲೆಯಲ್ಲಿ ಏನಿಲ್ಲ, ಇಂತಹ ದಾಖಲೆ ಬಜೆಟ್ ಅನ್ನು ಟೀಕಿಸುವ ಇವರು ಮನುಷ್ಯರಾ ಎಂದು ಕೆಪಿಸಿಸಿ ವಕ್ತಾರ ಎಚ್ ಎಚ್ ದೇವರಾಜ್ ವಾಗ್ದಾಳಿ ನಡೆಸಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನೆಡಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಚ್ ಎಚ್ ದೇವರಾಜ್, ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ನಲ್ಲಿ ಏನಿಲ್ಲಾ ಏನಿಲ್ಲಾ ಎಂದು ಟೀಕಿಸಿರುವ ಬಿಜೆಪಿಗರ ತಲೆಯಲ್ಲಿ ಏನಿಲ್ಲಾ, ಇಂತಹ ಅದ್ಭುತ ರಾಜ್ಯ ಬಜೆಟ್ ಅನ್ನು ಮಂಡಿಸಿದ ಬಂಗಾರದ ಮನುಷ್ಯ ಸಿದ್ದರಾಮಯ್ಯ. ಬಿಜೆಪಿ ಮುಖಂಡರು ಮೊದಲು ಬಜೆಟ್ ನನ್ನ ಸರಿಯಾಗಿ ಓದಿಕೊಂಡು ನಂತರ ಮಾತನಾಡಲಿ ಇದು ದೇಶಕ್ಕೆ ಮಾದರಿಯಾದ ಬಜೆಟ್ ಮಂಡಿಸಿರುವ ಸಿ.ಎಂ ಸಿದ್ದರಾಮಯ್ಯ ಕ್ರಾಂತಿಕಾರಿ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ, ಎಲ್ಲಾ ಕ್ಷೇತ್ರದ ಕಡೆ ಗಮನ ಹರಿಸಿರುವ ಅವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ಮಹಿಳೆಯರು ಎಲ್ಲರಿಗೂ ಅನುದಾನವನ್ನ ಕೊಡುವುದರ ಮುಖಾಂತರ ಶ್ರೀಸಾಮಾನ್ಯರ ಬಜೆಟ್ಟನ್ನು ಮಂಡಿಸಿದ್ದಾರೆ ಎಂದು ದೇವರಾಜ್ ಕೊಂಡಾಡಿದ್ದಾರೆ. ಇಂತಹ ಬಜೆಟ್ ಕೊಟ್ಟಿರುವ ಸಿದ್ದರಾಮಯ್ಯ ಒಬ್ಬ ಒಳ್ಳೆಯ ಅರ್ಥಶಾಸ್ತ್ರಜ್ಞ ಎಂದರೆ ತಪ್ಪಾಗಲಾರದು ಎಂದು ಅವರು ಹೊಗಳಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!