ಬಸ್ ಮರಕ್ಕೆ ಡಿಕ್ಕಿ, ಮುರಿದು, ಬಸ್ ಟಾಪ್ ಸೀಳಿ ಒಳಬಂದ ಮರ…!
1 min read
ಚಿಕ್ಕಮಗಳೂರು. ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಮರಕ್ಕೆ ಡಿಕ್ಕಿಯೊಡೆದ ರಭಸಕ್ಕೆ ಅದೇ ಮರ ಮುರಿದ ಬಸ್ಸಿನ ಮೇಲೆ ಬಿದ್ದು ಬಸ್ ಟಾಪ್ ಸೀಳಿ ಮರದ ತುಂಡು ಒಳಬಂದಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸೀಕೆ ಎಂಬ ಗ್ರಾಮದಲ್ಲಿ ನಡೆದಿದೆ. ಹಾಸನ ನೋಂದಣಿ ಹೊಂದಿರೋ ಸರ್ಕಾರಿ ಬಸ್ ಎನ್.ಆರ್.ಪುರದಿಂದ ಮೈಸೂರಿಗೆ ಹೊರಟಿತ್ತು. ಎನ್.ಆರ್.ಪುರದಿಂದ ಹೊರಟ ಬಸ್ ಎನ್.ಆರ್.ಪುರದಿಂದ 20 ಕಿ.ಮೀ. ಬರುವಷ್ಟರಲ್ಲಿ ಅತಿಯಾದ ಮಂಜು ಹಾಗೂ ಹಾವುಬಳುಕಿನ ಬೈಕಟ್ಟಿನ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಯೊಡೆದಿದೆ. ಬಸ್ ಮರಕ್ಕೆ ಡಿಕ್ಕಿಯೊಡೆದ ರಭಸಕ್ಕೆ ಬಸ್ಸಿನ ಮುಂಭಾಗ ಸಂಪೂರ್ಣನಜ್ಜುಗೊಜ್ಜಾಗಿದೆ.
ಬಸ್ ಮರಕ್ಕೆ ಡಿಕ್ಕಿಯೊಡೆಯುತ್ತಿದ್ದಂತೆ ಅದೇ ಮರ ಮುರಿದು ಬಸ್ಸಿನ ಮೇಲೆ ಬಿದ್ದಿದೆ. ಬಸ್ಸಿನ ಟಾಪ್ ಸೀಳಿ ಬಸ್ಸಿನ ಟೊಂಗೆಗಳು ಬಸ್ಸಿನ ಒಳಭಾಗಕ್ಕೂ ಬಂದಿದೆ. ಆ ಪ್ರಮಾಣಕ್ಕೆ ಬಸ್ ಮರಕ್ಕೆ ಡಿಕ್ಕಿಯೊಡೆದಿದೆ. ಇಷ್ಟು ದೊಡ್ಡ ಅನಾಹುತವಾಗಿದ್ದರೂ ಅದೃಷ್ಟವಶಾತ್ ಯಾವುದೇ ಸಾವು-ನೋವಿನ ಅನಾಹುತಗಳು ಸಂಭವಿಸಿಲ್ಲ. ಬಸ್ಸಿನಲ್ಲಿ 28 ಜನ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾರಿಗೂ ದೊಡ್ಡ ಅನಾಹುತ ಸಂಭವಿಸಿಲ್ಲ. 10-12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಳುಗಳನ್ನ ಬಾಳೆಹೊನ್ನೂರು ಹಾಗೂ ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಮರಕ್ಕೆ ಡಿಕ್ಕಿಯೊಡೆಯುತ್ತಿದ್ದಂತೆ ಸ್ಥಳಿಯರು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎನ್.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g