May 20, 2024

MALNAD TV

HEART OF COFFEE CITY

ಸಾಲು-ಸಾಲು ರಜೆ, ಕಾಫಿನಾಡಲ್ಲಿ ಪ್ರವಾಸಿಗರ ಜಾತ್ರೆ, ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್

1 min read

 

ಚಿಕ್ಕಮಗಳೂರು : ಸದಾ ಹಚ್ಚಹರಿಸಿನಿಂದ ಕಂಗೊಳಿಸೋ ಜಿಲ್ಲೆಯ ಕಳಸ ತಾಲೂಕಿನ ಪ್ರಕೃತಿ ಮಡಿಲಲ್ಲಿ ಟ್ರಕ್ಕಿಂಗ್‍ಗೆ ಹೇಳಿ ಮಾಡಿಸಿದಂತಹಾ ಜಾಗವಾದ ನೇತ್ರಾವತಿ ಪೀಕ್‍ನಲ್ಲಿ ಭಾರೀ ಪ್ರವಾಸಿಗರಿಂದ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ.‌ ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ತಪ್ಪಲು ಹಾಗೂ ಉಡುಪಿ ಜಿಲ್ಲೆಯ ಕಾರ್ಕಳದ ಗಡಿ ಭಾಗವಾದ ನೇತ್ರಾವತಿ ಪೀಕ್‍ನಲ್ಲಿ ಭಾರೀ ಪ್ರವಾಸಿಗರಿಂದ ಕುದುರೆಮುಖ-ಕಾರ್ಕಳ ರಸ್ತೆಯಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಭಾರೀ ವಾಹನಗಳಿಂದ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆದ ಪರಿಣಾಮ ಸ್ಥಳಿಯರು ಹಾಗೂ ಪ್ರವಾಸಿಗರ ಮಧ್ಯೆ ಮಾತಿನ ಚಕಮಕಿ ಕೂಡ ನಡೆದಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಭಾರೀ ಮಳೆಯಾಗದಿದ್ದರೂ ಸಾಧಾರಣವಾಗಿ ಇಡೀ ದಿನ ಮಳೆ ಸುರಿಯುತ್ತಿದೆ. ಮಳೆ ಮಧ್ಯೆಯೂ ಸಾವಿರಾರು ಪ್ರವಾಸಿಗರ ನೇತ್ರಾವತಿ ಪೀಕ್‍ನಲ್ಲಿ ಟ್ರಕ್ಕಿಂಗ್ ಮಾಡಲು ಆಗಮಿಸಿದ್ದರು. ಇದರಿಂದ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗರಿ, ದತ್ತಪೀಠ, ಸೀತಾಳಯ್ಯನಗಿರಿ ಭಾಗಕ್ಕೂ ಸಾವಿರರು ಪ್ರವಾಸಿಗರು ಭೇಟಿ ನೀಡಿದ್ದರಿಂದ ಮುಳ್ಳಯ್ಯನಗಿರಿ ಮಾರ್ಗದಲ್ಲೂ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಳ್ಳಯ್ಯಗಿರಿ ಭಾಗಕ್ಕೆ ಶನಿವಾರ-ಭಾನುವಾರ ಎರಡೇ ದಿನಕ್ಕೆ ಅಂದಾಜು 20 ಸಾವಿರದಷ್ಟು ಪ್ರವಾಸಿಗರು ಭೇಟಿ ನೀಡಿದ್ದಾರೆ. ಭಾನುವಾರ 604 ಬೈಕು, 2007 ಕಾರು, 219 ಟಿಟಿ ಅಂಡ್ ಮಿನಿ ಬಸ್‍ಗಳಲ್ಲಿ ಅಂದಾಜು 12 ಸಾವಿರದಷ್ಟು ಪ್ರವಾಸಿಗರು ಭೇಟಿ ನೀಡಿದ್ದಾರೆ. ಕೆಲ ಪ್ರವಾಸಿಗರು ಟ್ರಾಫಿಕ್ ಜಾಮ್‍ನಲ್ಲಿ ಮುಂದೆ ಹೋಗಲಾಗದೆ ವಾಪಸ್ ಹೋಗಿದ್ದಾರೆ. ಆ ಮಟ್ಟಕ್ಕೆ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರು ಭೇಟಿ ನೀಡಿದ್ದರು. ಗಿರಿ ಭಾಗದಲ್ಲಿ ಆಗಾಗ್ಗೆ ಮಳೆ ಸುರಿದಿದೆ. ಇದರಿಂದ ಮುಳ್ಳಯ್ಯನಗಿರಿಯ ಪ್ರಕೃತಿ ಸೌಂದರ್ಯ ಇಮ್ಮಡಿಗೊಂಡಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!