ಎ.ಐ.ಟಿ.ಯು.ಸಿ ರಾಜ್ಯ ಉಪಾಧ್ಯಕ್ಷರುಗಳಾಗಿ ಬಿ.ಅಮ್ಜದ್ ಮತ್ತು ಕೆ.ಗಣಶೇಖರ್ ಆಯ್ಕೆ
1 min read
ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ನ ರಾಜ್ಯ ಉಪಾಧ್ಯಕ್ಷರುಗಳಾಗಿ ಚಿಕ್ಕಮಗಳೂರಿನ ಬಿ.ಅಮ್ಜದ್ ಮತ್ತು ಕೆ.ಗುಣಶೇಖರ್ ಆಯ್ಕೆ ಯಾಗಿದ್ದಾರೆ.
: ಮೇ 29 ರಿಂದ ಮೇ 31 ರವರೆಗೆ ಮೈಸೂರಿನಲ್ಲಿ ಜರುಗಿದ ಎಐಟಿಯುಸಿ ಯ 11 ನೆಯ ರಾಜ್ಯ ಸಮ್ಮೇಳನದಲ್ಲಿ ಈ ಆಯ್ಕೆ ನಡೆದಿದೆ.
ಭಾರತದ ಪ್ರಥಮ ಮತ್ತು ಹಿರಿಯ ಕಾರ್ಮಿಕ ಸಂಘಟನೆ ಯಾಗಿರುವ ಎಐಟಿಯುಸಿ 1920 ರಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಸಂಪೂರ್ಣ ಸ್ವಾತಂತ್ರ್ಯದ ಬೇಡಿಕೆ ಮುಂದಿರಿಸಿ ಕಾರ್ಮಿಕರು ಅನುಭವಿಸುತ್ತಿದ್ದ ಶೋಷಣೆ, ಅನ್ಯಾಯ,ದಬ್ಬಾಳಿಕೆ, ಅಸಮಾನತೆಗಳ ವಿರುದ್ಧ ದ್ವನಿ ಎತ್ತಲು ಉದಯಿಸಿದ ಎಐಟಿಯುಸಿ ಗೆ ಸ್ವಾತಂತ್ರ್ಯ ಸೇನಾನಿ ಲಾಲ ಲಜಪತ ರಾಯ್, ಸುಭಾಷ್ ಚಂದ್ರ ಬೋಸ್, ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು, ನಾಲ್ಕನೇ ರಾಷ್ಟ್ರಪತಿ ವಿ.ವಿ.ಗಿರಿ ಸೇರಿದಂತೆ ಹಲವಾರು ಮಹಾನ್ ನಾಯಕರು ನಾಯಕತ್ವ ನೀಡಿದ ಸಂಘಟನೆ ಯಾಗಿದೆ.
ಸದರಿ ಎಐಟಿಯುಸಿ ಗೆ ರಾಜ್ಯದ ಅಧ್ಯಕ್ಷರಾಗಿ ಹೆಚ್.ವಿ.ಅನಂತ ಸುಬ್ಬರಾವ್ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಡಿ.ಎ.ವಿಜಯಭಾಸ್ಕರ್ ಆಯ್ಕೆ ಗೊಂಡಿದ್ದಾರೆ.
ಎಐಟಿಯುಸಿ ಯ ನೂತನ ರಾಜ್ಯ ಸಮಿತಿಗೆ ಚಿಕ್ಕಮಗಳೂರು ಜಿಲ್ಲೆಯ ಕಟ್ಟಡ ಕಾರ್ಮಿಕ ಸಂಘಟನೆ ಯ ವಸಂತಕುಮಾರ್ ತೇಗೂರು ಹಾಗೂ ಅಂಗನವಾಡಿ ಸಂಘಟನೆಯ ಕೆ.ಸಿ. ವಿಜಯಕುಮಾರಿ ಅಜ್ಜಂಪುರ ಇವರನ್ನು ರಾಜ್ಯ ಸಮಿತಿ ಸದಸ್ಯರು ಗಳಾಗಿ ಆಯ್ಕೆ ಮಾಡಲಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g